ಕೆಜಿಎಫ್, ಮದಗಜ, ಭಜರಂಗಿ ಚಿತ್ರೀಕರಣ ಸದ್ಯದಲ್ಲೇ ಆರಂಭ !

ಕಳೆದ ನಾಲ್ಕೂವರೆ ತಿಂಗಳಿಂದ ಸ್ಥಗಿತವಾಗಿದ್ದ ಕನ್ನಡ ಚಿತ್ರರಂಗದ ಚಟುವಟಿಕೆಗಳು ನಿಧಾನಗತಿಯಲ್ಲಿ ಆರಂಭವಾಗುತ್ತಿವೆ. ಈ ಮೂಲಕ ಚಿತ್ರೋದ್ಯಮದಲ್ಲಿ ಚೇತರಿಕೆ ಕಂಡುಬಂದಿದೆ. ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಜಾಕ್‍ಮಂಜು ಹೈದ್ರಾಬಾದ್‍ನಲ್ಲಿ ಕಳೆದ 20 ದಿನಗಳಿಂದಲೂ ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಸುತ್ತಿದ್ದಾರೆ. ಕೊರೊನಾ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಮುಂಜಾಗ್ರತೆ ವಹಿಸಿರುವ ಕಾರಣ ಈವರೆಗೆ ಯಾವುದೇ ಒಂದು ಸಣ್ಣ ತೊಂದರೆ ಕೂಡ ಸಂಭವಿಸದೆ ಯಶಸ್ವಿಯಾಗಿ ಶೂಟಿಂಗ್ ಸಾಗಿದೆ.

ಇವರನ್ನು ನೋಡಿ ಸ್ಫೂರ್ತಿ ಪಡೆದ ಬೇರೆ ಟೀಮ್‍ನವರೂ ಈಗ ಶೂಟಿಂಗ್ ಆರಂಭಿಸುತ್ತಿದ್ದಾರೆ. ಹಾಗಾಗಿ ಸದ್ಯದ¯್ಲÉೀ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸಂಪೂರ್ಣವಾಗಿ ಶುರುವಾಗುವ ಲಕ್ಷಣ ಕಂಡುಬಂದಿದೆ. ಕೊರೋನಾ ಬಗೆಹರಿಯುವವರೆಗೂ ಶೂಟಿಂಗ್ ನಡೆಸೋದೆ ಬೇಡ ಎಂದುಕೊಂಡಿದ್ದವರು ಈಗ ಸೆಟ್‍ಗ ಇಳಿಯುತ್ತಿz್ದÁರೆ. ಹಾಗಾಗಿ ಪ್ರಶಾಂತ್‍ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರೀಕರಣ ಆಗಸ್ಟ್ 15ರಿಂದ ಆರಂಭವಾಗುತ್ತಿದೆ. ರಾಕಿಂಗ್‍ಸ್ಟಾರ್ ಯಶ್ ನಾಯಕನಾಗಿರುವ ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಒಂದು ಫೈಟ್ ಮತ್ತು ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಮಿನರ್ವ ಮಿಲïನಲ್ಲಿ ಚಿತ್ರಕ್ಕಾಗಿ ಸೆಟ್ ಹಾಕುವ ಕೆಲಸ ಈಗಾಗಲೇ ಶುರುವಾಗಿದ್ದು, ಸದ್ಯದಲ್ಲೇ ಶೂಟಿಂಗ್ ಕೂಡ ಪ್ರಾರಂಭವಾಗಲಿದೆ.

ಇನ್ನು ಶ್ರೀಮುರುಳಿ ನಾಯಕನಾಗಿ ಅಭಿನಯಿಸುತ್ತಿರುವ ಮದಗಜ ಚಿತ್ರದ ಶೂಟಿಂಗ್‍ಗೂ ಸಿದ್ಧತೆ ನಡೆಯುತ್ತಿದೆ. ಅಯೋಗ್ಯ ಖ್ಯಾತಿಯ ಮಹೇಶ್‍ಕುಮಾರ್ ಮದಗಜ ಚಿತ್ರದ ಸಾರಥ್ಯ ವಹಿಸಿಕೊಂಡಿz್ದÁರೆ. ಆಶಿಕಾ ರಂಗನಾಥ್ ನಾಯಕಿಯಾಗಿ ಮುರುಳಿಗೆ ಸಾಥ್ ನೀಡಲಿz್ದÁರೆ. ವಾರಣಾಸಿಯಲ್ಲಿ ಚಿತ್ರದ ಮೊದಲಹಂತದ ಶೂಟಿಂಗ್ ಮುಗಿಸಿರುವ ತಂಡ ಈಗ ಮತ್ತೆ ಶೂಟಿಂಗ್ ಆರಂಭಿಸಲಿದೆ.

ಈ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಭಜರಂಗಿ-2 ಚಿತ್ರದ ಚಿತ್ರೀಕರಣಕ್ಕೂ ಚಾಲನೆ ದೊರೆಯುತ್ತಿದೆ. ವಜ್ರಕಾಯ ಖ್ಯಾತಿಯ ಎ.ಹರ್ಷ ನಿರ್ದೇಶನದ ಈ ಚಿತ್ರದ ಚಿತ್ರೀಕರಣವೂ ಮತ್ತೆ ಆರಂಭವಾಗಲಿದೆ. ಮೋಹನ್ ಬಿ.ಕೆರೆ ಅವರ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿಯೇ ಬೃಹತ್ ಸೆಟ್ಟನ್ನು ನಿರ್ಮಿಸಲಾಗಿದ್ದು, ಅಲ್ಲಿಂದಲೇ ಚಿತ್ರೀಕರಣ ಶುರುವಾಗಲಿದೆ. ಸುಮಾರು 12 ದಿನಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ. ಅದರಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಈ ಸ್ಟುಡಿಯೋದಲ್ಲಿ ನಡೆಯಲಿದೆ.

ಚಿತ್ರರಂಗದ ಕಾರ್ಮಿಕರ ಒಳಿತಿಗಾಗಿ ಈ ಸಂಕಷ್ಟದ ಸಮಯದಲ್ಲಿಯೂ ಚಿತ್ರೀಕರಣ ನಡೆಸುವುದು ಅನಿವಾರ್ಯವಾಗಿದೆ ಎಂದು ಇತ್ತೀಚೆಗಷ್ಟೇ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿದ್ದ ಶಿವರಾಜ್‍ಕುಮಾರ್ ಅವರು ಹೇಳಿದ್ದರು. ಚಿತ್ರೀಕರಣ ನಡೆಸದೆ ತಾವು ಮನೆಯೊಳಗೆ ಕುಳಿತರೆ ಸಿನಿಮಾಗಳನ್ನು ಅವಲಂಬಿಸಿರುವ ಇತರರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಶಿವಣ್ಣ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ಮುಂದಾಗಿz್ದÁರೆ. ಎ.ಹರ್ಷ ಮತ್ತು ಶಿವರಾಜ್‍ಕುಮಾರ್ ಅವರ ಕಾಂಬಿನೇಷನ್‍ನಲ್ಲಿ ಹೊರಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಜಯಣ್ಣ ಫಿಲಂಸ್‍ನ ಜಯಣ್ಣ ಭೋಗೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.