ಮಮತಾ ಬ್ಯಾನರ್ಜಿಯನ್ನು ‘ಶೂರ್ಪನಖಿ’ ಎಂದು ಕರೆದ ಉತ್ತರ ಪ್ರದೇಶ ಬಿಜೆಪಿ ಶಾಸಕ

ಉತ್ತರ ಪ್ರದೇಶ: ವಿವಾದಾತ್ಮಕ ಹೇಳಿಕೆ ಗಳನ್ನು ತಡೆಗಟ್ಟಿ ಎಂದು ಪ್ರಧಾನಿ ನರೇಂದ್ರಮೋದಿ ತನ್ನ ಪಕ್ಷದ ನಾಯಕರಿಗೆ ಹೇಳಿದ ಮಾರನೇ ದಿನವೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರಸಿಂಗ್ ಮಮತಾ ಬ್ಯಾನರ್ಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುರೇಂದ್ರಸಿಂಗ್, ಕಾಂಗ್ರೆಸ್ ಪಕ್ಷವನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿ ಎಂದು ಕರೆದಿದ್ದಾರೆ. ಹಿಂದೂ ಮಹಾಗ್ರಂಥ ರಾಮಾಯಣದಲ್ಲಿ ರಾವಣನ ತಂಗಿ ಶೂರ್ಪನಖಿ ಆಗಿದ್ದಾಳೆ. ಬೈರಿಯಾದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಸುರೇಂದ್ರಸಿಂಗ್ ಮಮತಾ ಬ್ಯಾನರ್ಜಿ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಇದೆ.