ನಿಖಿಲ್ ಎ.ಪಿ.ಅರ್ಜನ್ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ

ಮದುವೆ ಮೂಡ್‍ನಲ್ಲಿರುವ ನಿಖಿಲ್‍ಕುಮಾರಸ್ವಾಮಿ ಈಗ ಮದುವೆ ಬ್ಯುಸಿಯ ನಡುವೆಯೂ ಸಿನಿಮಾ ಕೆಲಸವನ್ನು ನಿಲ್ಲಿಸಿಲ್ಲ. ಕೊರೊನಾ ಭೀತಿಯಿಂದ ಚಿತ್ರೀಕರಣ ಎ¯್ಲÉಡೆ ರz್ದÁಗಿದ್ದರೂ ಸಹ ಕಥೆ ಕೇಳುವುದು, ಹೊಸ ಚಿತ್ರಗಳಿಗೆ ಸಹಿ ಹಾಕುವ ಕಾರ್ಯ ಮುಂದುವರೆಸಿz್ದÁರೆ. ಈಗಾಗಲೇ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾ ಗಳಿವೆ. ಆ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರಿದೆ. ನಿಖಿಲ್ ಚಿತ್ರವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಅರ್ಜುನ್ ಕೆಲ ಮಾಹಿತಿ ಹಂಚಿಕೊಂಡಿz್ದÁರೆ. ಈಗಾಗಲೇ ಜಾಗ್ವಾರ್, ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ ಸಿನಿಮಾಗಳ ಮೂಲಕ ಮಿಂಚಿರುವ ನಿಖಿಲ್ ಈಗ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತಿz್ದÁರೆ.

ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ನಿಖಿಲ್ ಚಿತ್ರದ ವಿಷಯ ನಿಖಿಲ್ ಅವರ ಬರ್ತಡೇ ಸಮಯದ¯್ಲÉೀ ಹೊರಬಿದ್ದಿತ್ತು. ಆದರೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿರಲಿಲ್ಲ. ಚಿತ್ರದ ಕಥೆ ಮತ್ತು ನಿರೂಪಣೆ ಯಾವ ರೀತಿ ಇರಲಿದೆ ಎಂಬುದನ್ನು ಈಗ ಅರ್ಜುನ್ ಹೇಳಿಕೊಂಡಿz್ದÁರೆ. ಲವ್ ಸ್ಟೋರಿಗಳ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಪಿ.ಅರ್ಜುನ್ ಅವರೊಟ್ಟಿಗೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮಾಡಲಿದ್ದು, ಈಗಾಗಲೇ ಮಾತುಕತೆ ಅಂತಿಮವಾಗಿದ್ದು, ಮುಂದಿನವಾರ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರುವ ಸಾಧ್ಯತೆಯಿದೆ. ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ದಲ್ಲಿ ಸಹ ನಿಖಿಲ್ ನಾಯಕರಾಗಿ ಅಭಿನಯಿಸುತ್ತಿz್ದÁರೆ. ಇದೊಂದು ಕ್ರೀಡೆಗೆ ಸಂಬಂಧಿತ ಕತೆಯಾಗಿದೆ. ಆದರೆ ಈ ನಡುವೆ ಹೊಸ ಚಿತ್ರವೊಂದಕ್ಕೆ ನಿಖಿಲ್ ಸಹಿ ಮಾಡಿz್ದÁರೆ. ಚಿತ್ರವನ್ನು ನಿಖಿಲ್ ಕುಮಾರಸ್ವಾಮಿ ಅವರ ಸ್ವಂತ ನಿರ್ಮಾಣ ಸಂಸ್ಥೆಯಿಂ ದಲೇ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ನಾಯಕ ಕೂಡ ಅವರೇ ಆಗಿರಲಿz್ದÁರೆ. ಎ.ಪಿ.ಅರ್ಜುನ್ ನಿರ್ದೇಶನ ವಿರುವ ಕಾರಣ ಸಿನಿಮಾ ಅಪ್ಪಟ ಪ್ರೇಮ ಕತೆ ಆಗಿರಲಿದೆ ಎಂಬ ಬಗ್ಗೆ ಅನುಮಾನವಿಲ್ಲ. ಚಿತ್ರದ ಇತರ ತಾರಾಗಣ ಇನ್ನೂ ಅಂತಿಮ ವಾಗಿಲ್ಲ. ಎ.ಪಿ.ಅರ್ಜುನ್ ಅವರ ‘ಕಿಸ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಈಗ ‘ಅದ್ದೂರಿ ಲವರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿz್ದÁರೆ. ಈ ನಡುವೆಯೇ ನಿಖಿಲ್ ಅವರ ಸಿನಿಮಾಕ್ಕೆ ಚಿತ್ರಕತೆ ಬರೆಯುತ್ತಿz್ದÁರೆ. ನಿಖಿಲ್ ಮದುವೆ ನಂತರ ಈ ಹೊಸ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.