ಫೆ.20ಕ್ಕೆ ತರಿಕಲ್ ಗ್ರಾಮದಲ್ಲಿ ಡಿಸಿ ವಾಸ್ತವ್ಯ

ಮೈಸೂರು, ಫೆ.17- ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳನ್ನು ತಳಮಟ್ಟ ದಿಂದಲೇ ಪರಿಹರಿಸುವ ನಿಟ್ಟಿ ನಲ್ಲಿ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ದಡಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿ ದಂತೆ ಇತರೆ ಅಧಿಕಾರಿಗಳು 2021ರ ಫೆ.20ರಂದು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತರಿಕಲ್ ಗ್ರಾಮ ದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮ ಭೇಟಿ ಕಾರ್ಯಕ್ರಮವನ್ನು ನಡೆಸಿದ ನಂತರ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ ದಾಖಲೆಗಳು, ಸಾಮಾಜಿಕ ಭದ್ರತಾ ಯೋಜನೆ ವಿಷಯಗಳು, ಪೆÇೀಡಿ ಕ್ರಮದ ವಿಷಯ ಗಳು, ಸ್ಮಶಾನ ಹಾಗೂ ಆಶ್ರಯ ನಿವೇ ಶನದ ಉದ್ದೇಶಕ್ಕೆ ಜಮೀನು ಕಾಯ್ದಿ ರಿಸುವ ವಿಷಯ, ಎ.ಜೆ.ಎಸ್.ಕೆ, ನಾಡ ಕಚೇರಿ ಸೇವೆಗಳ ಬಗ್ಗೆ ಆಲಿಸಲಿದ್ದಾರೆ. ಅತಿವೃಷ್ಟಿ ಮತ್ತು ಕಂದಾಯ ಇಲಾಖೆಯ ಇತರೆ ವಿಷಯಗಳ ಕುರಿತು ಸಮಸ್ಯೆಗಳನ್ನು ಗ್ರಾಮದಲ್ಲಿಯೇ ಬಗೆಹರಿಸಲು ಹಾಗೂ ವಿವಿಧ ಹಂತದಲ್ಲಿ ವಿಚಾರಣೆಯ ಅಗತ್ಯ ವಿದ್ದಲ್ಲಿ ಅಗತ್ಯ ಕ್ರಮವಹಿಸಿ ಪೂರ್ಣ ಗೊಳಿಸಿ ಮತ್ತು ಅರ್ಹ ಫಲಾನುಭವಿ ಗಳಿಗೆ ಸೌಲಭ್ಯವನ್ನು ವಿತರಿಸಲಾಗುತ್ತದೆ.