ಬಿರುಗಾಳಿಗೆ ಹಾರಿ ಹೋದ ಮನೆ ಮೇಲ್ಛಾವಣ

ಬೇಗೂರು, ಏ.23- ಸಮೀಪದ ಕೆಬ್ಬೆಪುರ ಗ್ರಾಮದಲ್ಲಿ ಭಾನುವಾರ ಸುರಿದ ಬಿರುಗಾಳಿ ಮಳೆಗೆ ಹಲವು ಮನೆಗಳ ಮೇಲ್ಛಾವಣ ಶೀಟ್ ಹಾರಿ ಹೋಗಿವೆ.

ಗ್ರಾಮದ ಚಿನ್ಮಯಪ್ಪ ಎಂಬುವರ ಮಗ ಸಿ.ಕುಮಾರಸ್ವಾಮಿ ಅವರ ಮನೆಯ ಮೇಲ್ಛಾವಣ ಶೀಟುಗಳು ಹಾಗೂ ಗ್ರಾಮದ ರತ್ನಮ್ಮ ಅವರ ಮನೆಯ ಹೆಂಚುಗಳು ಬಿರುಗಾಳಿಗೆ ಹಾರಿ ಹೋಗಿದ್ದು, ದವಸ ಧಾನ್ಯಗಳು ಹಾಗೂ ಇತರೆ ಪದಾರ್ಥಗಳು ಮಳೆಯ ನೀರಿನಲ್ಲಿ ಕೊಚ್ಚ ಹೋಗಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ.