ಚಾಮರಾಜನಗರ, ಜೂ.1 (ಎಸ್ಎಸ್)- ಭಾರತೀಯ ವಾಯುಸೇನೆಯ ಕಿರಣ್ ತರ ಬೇತಿ ವಿಮಾನವೊಂದು ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಗುರು ವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ತೇಜ್ಪಾಲ್(50) ಹಾಗೂ ವಿಮಾನ ತರಬೇತಿ ಪಡೆಯುತ್ತಿದ್ದ ಭೂಮಿಕಾ (28) ಪ್ಯಾರಚೂಟ್ ಮೂಲಕ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೋಗಾಪುರ, ಸಪ್ಪಯ್ಯನಪುರ ನಡುವಿನ ಗೋಮಾಳ ದಲ್ಲಿ ಈ ವಿಮಾನ ಪತನಗೊಂಡಿದ್ದು, ಕೆಲವೇ ಮೀಟರ್ ಅಂತರದಲ್ಲಿ ಕೃಷಿಯಲ್ಲಿ ತೊಡಗಿದ್ದ ರೈತರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ: ಬೆಂಗಳೂರಿನ ಹೆಚ್ಎಎಲ್…
ಬಂಡೀಪುರದ ರಮ್ಯ ಪ್ರಕೃತಿ ಸೌಂದರ್ಯ ಸವಿದ ಮೋದಿ
April 10, 2023ಚಾಮರಾಜನಗರ, ಏ.9(ಎಸ್ಎಸ್) -ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀ ಪುರ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಿ ಎರಡು ಗಂಟೆಗಳ ಕಾಲ ಸಫಾರಿ ನಡೆಸಿದರು. ಮೈಸೂರಿನಿಂದ ವಾಯುಪಡೆ ವಿಶೇಷ ಹೆಲಿಕಾಫ್ಟರ್ನಲ್ಲಿ ಹೊರಟ ನರೇಂದ್ರ ಮೋದಿ ಬೆಳಗ್ಗೆ 7.20ರ ಸುಮಾರಿಗೆ ಮೇಲುಕಾನಹಳ್ಳಿಯ ಸಫಾರಿ ಕೇಂದ್ರದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿ ಪ್ಯಾಡ್ಗೆ ಬಂದಿಳಿದರು. ಇವರನ್ನು ಹಿರಿಯ ಅರಣ್ಯಾಧಿಕಾರಿಗಳಾದ ಡಿ.ಡಿ.ಜಿ. ಸುಬ್ರಮಣ್ಯಂ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರದ ಐಜಿಪಿ ಮುರುಳಿ…
ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ
March 2, 2023ಚಾಮರಾಜನಗರ, ಮಾ.1(ಎಸ್ಎಸ್)- ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಮಲೆ ಮಹದೇಶ್ವರ ಬೆಟ್ಟ ದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ರಥ ಯಾತ್ರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಗಾರಿ ಬಾರಿಸಿ, ಬಿಜೆಪಿ ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು. ಮಲೆ ಮಹದೇಶ್ವರ ದೇವಸ್ಥಾನದ ಎದುರಿನ ಮೈದಾನ ದಲ್ಲಿ, ಅಲಂಕೃತಗೊಂಡ ವಾಹನದ ಮುಂಭಾಗ ನಗಾರಿ ಬಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ವಾಹನವನ್ನೇರಿ ಎಲ್ಲ ಮುಖಂಡರೂ ಜನರತ್ತ ಕೈಬೀಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ…
ಬಿಳಿಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೂವರು ಕಾರ್ಮಿಕರ ಸಾವು
December 27, 2022ಚಾಮರಾಜನಗರ, ಡಿ.26(ಎಸ್ಎಸ್)- ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಮೂವರು ಸಾವನ್ನಪ್ಪಿದ್ದ ಘಟನೆ ಈ ಭಾಗದ ಜನರ ಮನಸ್ಸಿ ನಿಂದ ಮಾಸುವ ಮುನ್ನವೇ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಇಂತಹುದೇ ದುರಂತವೊಂದು ಸಂಭವಿಸಿ, ಮೂವರು ದುರಂತ ಸಾವಿಗೀಡಾಗಿದ್ದಾರೆ. ಬಿಳಿಕಲ್ಲು ಕ್ವಾರಿಯ ಕಲ್ಲುಗುಡ್ಡ ಕುಸಿದು ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಮಹದೇವಶೆಟ್ಟಿ ಅವರ ಪುತ್ರ ಶಿವರಾಜು(29), ಮಾದಶೆಟ್ಟಿಯವರ ಪುತ್ರ ಕುಮಾರ(35) ಹಾಗೂ ಕುಳ್ಳಮಾದಶೆಟ್ಟಿಯವರ ಪುತ್ರ ಸಿದ್ದರಾಜು (31) ಮೃತ ಕಾರ್ಮಿಕರು. ಈ ಪೈಕಿ…
ಅಳಿವಿನಂಚಿನಲ್ಲಿರುವ‘ಕಾಡುಪಾಪ’ಗಳ ರಕ್ಷಣೆ
December 16, 2022ಕೊಳ್ಳೇಗಾಲ, ಡಿ.15- ಬೆಂಗಳೂರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಅಳಿವಿನಂಚಿನಲ್ಲಿರುವ ಎರಡು ಕಾಡುಪಾಪ, ಬೇಟೆಗಾರರಿಂದ ರಕ್ಷಿಸುವಲ್ಲಿ ಕೊಳ್ಳೇ ಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಹದೇಶ್ವರ ಬೆಟ್ಟದ ಜಡೇಶೆಟ್ಟಿ ಪುತ್ರ ವೀರಭದ್ರ (58) ಮತ್ತು ಮೈಸೂರು ತಾಲೂಕು ದೊಡ್ಡಕಾನ್ಯ ಗ್ರಾಮದ ನಿವಾಸಿ ಪುಟ್ಟಸ್ವಾಮ ಪ್ಪರ ಪುತ್ರ ರಾಜುವನ್ನು ಈ ಸಂಬಂಧ ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆಣೆಹೊಲ ಗ್ರಾಮದ ಮಹದೇವ ತಲೆಮರೆಸಿಕೊಂಡಿದ್ದಾನೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶವೊಂದರ ಮುಖ್ಯ ರಸ್ತೆಯ ಬಳಿ ಎರಡು ಕಾಡುಪಾಪ…
ಪೊಲೀಸ್ ಜೀಪಿನಿಂದ ಹಾರಿ ಆರೋಪಿ ದುರಂತ ಸಾವಿನ ಪ್ರಕರಣ ಸರ್ಕಲ್ ಇನ್ಸ್ಪೆಕ್ಟರ್ ಸೇರಿ ಐವರು ಅಮಾನತು
December 1, 2022ಚಾಮರಾಜನಗರ, ನ.30- ಬಾಲಕಿ ಅಪ ಹರಣ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ಪೊಲೀಸ್ ಜೀಪಿನಿಂದ ಹಾರಿ ದುರಂತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಯಳಂದೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಾದೇಗೌಡ, ಎಎಸ್ಐ ಚೆಲುವರಾಜು, ಮಹಿಳಾ ಕಾನ್ಸ್ಟೇಬಲ್ ಭದ್ರಮ್ಮ ಹಾಗೂ ಕಾನ್ಸ್ಟೇಬಲ್ ಸೋಮ ಶೇಖರ್ ಅಮಾನತುಗೊಂಡವರು. ಅಮಾನತು ಗೊಂಡಿರುವ ಐವರ ಪೈಕಿ ಶಿವಮಾದಯ್ಯ, ಮಾದೇಗೌಡ ಹಾಗೂ ಸೋಮಶೇಖರ್ ವಿರುದ್ಧ ಎಫ್ಐಆರ್…
ಸಿದ್ದರಾಮಯ್ಯ ರಾಜಕೀಯ ಅಲೆಮಾರಿ
November 10, 2022ಚಾಮರಾಜನಗರ, ನ.9- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಕೇವಲ ವೀರಾವೇಶದ ಮಾತುಗಳನ್ನು ಆಡ್ತಾರೆ. ಆತ ರಾಜಕೀಯ ಅಲೆಮಾರಿ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತನಗೆ ಸಹಾಯ ಮಾಡಿದವರನ್ನು ನೆನೆಯವುದಿಲ್ಲ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ಸಭೆ ಸಮಾರಂಭಗಳಲ್ಲಿ ಕೇವಲ ವೀರಾ ವೇಶದ ಮಾತುಗಳನ್ನು ಆಡುತ್ತಾರೆ ಅಷ್ಟೇ ಎಂದು ತಮ್ಮದೇ ಧಾಟಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು…
ಚಾ.ನಗರ ಜಿಲ್ಲೆಯಾದ್ಯಂತ ಭಾರೀ ಮಳೆ
October 15, 2022ಚಾಮರಾಜನಗರ,ಅ.14-ಜಿಲ್ಲೆಯಾ ದ್ಯಂತ ಗುರುವಾರ ಮಧ್ಯರಾತ್ರಿಯಿಂದ ಶುಕ್ರ ವಾರ ಮುಂಜಾನೆವರೆಗೆ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಗುರುವಾರ ಮಧ್ಯರಾತ್ರಿ ಸುಮಾರು 2 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6.30ರ ವರೆಗೂ ಸತತವಾಗಿ ಮಳೆ ಸುರಿಯತು. ನಗರದಲ್ಲಿ ಅವಾಂತರ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಮಳೆಯಿಂದ ಅವಾಂ ತರ ಸೃಷ್ಟಿಯಾಯಿತು. ಜೋಡಿರಸ್ತೆಯಲ್ಲಿ ರುವ ಜಿಲ್ಲಾಡಳಿತ ಭವನ ಮುಂಭಾಗ ಯಥಾ ಪ್ರಕಾರ ಕೆರೆಯಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ರಾಜಕಾಲುವೆ ತುಂಬಿದ್ದರಿಂದ ಭಾರೀ ಪ್ರಮಾಣದ ನೀರು ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹರಿಯಿತು. ಚರಂಡಿಗೆ ನೀರು…
ಚಾಮರಾಜನಗರ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಬಲಿ
September 7, 2022ಚಾಮರಾಜನಗರ, ಸೆ.6- ಸಿಡಿಲು ಬಡಿದು ಇಬ್ಬರು ರೈತರು ಸೇರಿದಂತೆ 6 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೇವಣ್ಣ(45) ಹಾಗೂ ಹನೂರು ತಾಲೂಕಿನ ಮೀಣ್ಯಂ ಗ್ರಾಮದ ನಿವಾಸಿ ಎಸ್.ಮಾದಪ್ಪ(64) ಮೃತಪಟ್ಟವರು. ಕೆಸ್ತೂರು ಗ್ರಾಮದ ರೈತ ರೇವಣ್ಣ ಅವರು ತಮ್ಮ ಜಮೀನಿನಲ್ಲಿ ಭತ್ತ ನಾಟಿ ಮಾಡು ತ್ತಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೀಣ್ಯಂ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ…
ಚಾಮರಾಜನಗರ ಜಿಲ್ಲೆಯಲ್ಲಿವರುಣನ ಅಟ್ಟಹಾಸ
September 6, 2022ಚಾಮರಾಜನಗರ, ಸೆ.5-ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದುವರೆ ದಿದ್ದು, ಜಿಲ್ಲೆಯ ಚಿತ್ರಣವೇ ಬದಲಾ ಗಿದೆ. ಭಾನುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗುಂಡ್ಲು ಪೇಟೆ ತಾಲೂಕಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಗಾಯ ಗೊಂಡಿದ್ದಾರೆ. ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದ ಬೆಳೆ ನಾಶವಾಗಿದ್ದರೆ, ಒಳ ಹರಿವು ಹೆಚ್ಚಳದಿಂದ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕ ಹೊಳೆ ಜಲಾಶಯಗಳಿಂದ ಅಪಾರ ಪ್ರಮಾಣ ದಲ್ಲಿ ಹೊರ ನೀರು ಬಿಟ್ಟಿದ್ದು, ಹಲವು ಗ್ರಾಮ ಗಳು…