ಮಡಿಕೇರಿ, ಮೇ 24-ಜೂನ್ 4ರಿಂದ ರಾಜ್ಯ ದಲ್ಲಿ ಮುಂಗಾರು ಆರಂಭವಾಗಲಿದ್ದು, ಈ ವೇಳೆಗೆ ಕೊಡಗು ಜಿಲ್ಲೆಗೆ ಎನ್ಡಿಆರ್ಎಫ್ ತಂಡ ಆಗಮಿಸುವ ನಿರೀಕ್ಷೆ ಇದೆ. ಜೂನ್ 9 ಮತ್ತು 10ರಂದು ಜಿಲ್ಲೆಯ ಕೆಲವು ಕಡೆಗಳಲ್ಲಿ ಜನ-ಜಾನುವಾರು ರಕ್ಷಣೆ ಕುರಿತು ಎನ್.ಡಿ.ಆರ್.ಎಫ್ ಯೋಧರ ತಂಡ ಅಣುಕು ಪ್ರದರ್ಶನ ನೀಡುವ ಮೂಲಕ ಸಾರ್ವ ಜನಿಕರ ರಕ್ಷಣೆಯ ಅಭಯ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಹೊರ ರಾಜ್ಯದಿಂದ ಬರುವ ಎನ್ಡಿಆರ್ಎಫ್ ತಂಡ ಈ ಹಿಂದೆ ಪೊಲೀಸ್…
ಭಕ್ತರ ಮನೆ ಬಾಗಿಲಿಗೆ ಭಾಗಮಂಡಲ ಭಗಂಡೇಶ್ವರ, ತಲಕಾವೇರಿ ಪ್ರಸಾದ
March 7, 2023ಮಡಿಕೇರಿ, ಮಾ.6-ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಗಳ ಇಲಾಖೆಯ ವತಿಯಿಂದ ಮಡಿಕೇರಿ ಅಂಚೆ ಕಚೇರಿಯ ಸಹಕಾರದೊಂದಿಗೆ ಕಾವೇರಿ ಕ್ಷೇತ್ರದ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಆನ್ಲೈನ್ ಸೇವೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಇಂದು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ ಶ್ರೀ ತಲಕಾವೇರಿಯ 100 ಎಂ.ಎಲ್ ತೀರ್ಥ, ತ್ರಿವೇಣಿ ಸಂಗಮ ಭಾಗಮಂಡ ಲದ ಶ್ರೀ ಭಗಂಡೇಶ್ವರ ದೇಗುಲದ ಪಂಚ ಕಜ್ಜಾಯ, ಕುಂಕುಮ, ಗಂಧವನ್ನು ಒಳ ಗೊಂಡ ಪ್ರಸಾದದ ಡಬ್ಬಿಯನ್ನು…
ಆದಿವಾಸಿ ಯುವಕನ ಬಲಿ ಪಡೆದಿದ್ದ ಹೆಣ್ಣು ಹುಲಿ ಯಶಸ್ವಿ ಸೆರೆ
February 15, 2023ಬಳ್ಳೆ ಹಾಡಿ,ಫೆ.14(ಎಂಟಿವೈ)- ಹೆಚ್.ಡಿ.ಕೋಟೆಯ ಬಳ್ಳೆ ಹಾಡಿ ಸಮೀಪ ಆದಿವಾಸಿ ಯುವಕನ ಬಲಿ ಪಡೆದಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆ ಹಿಡಿದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಗಾಯಗೊಂಡ ಹುಲಿ ಓಡಾಡುತ್ತಿರುವುದನ್ನು ಗಮನಿಸಿದ್ದ ಅರಣ್ಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಫೆ.13ರಂದು ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿತ್ತು. ಆ ವೇಳೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದ ಹುಲಿಯನ್ನು…
ತಾತ-ಮೊಮ್ಮಗನ ಬಲಿ ಪಡೆದ ಹುಲಿ ಸೆರೆ
February 15, 2023ಗೋಣಿಕೊಪ್ಪ/ಮಡಿಕೇರಿ,ಫೆ.14- ಮೊಮ್ಮಗ ಮತ್ತು ತಾತನನ್ನು ಬಲಿ ಪಡೆ ದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾ ಗಿದೆ. 48 ಗಂಟೆಯಲ್ಲಿ ಹುಲಿ ಸೆರೆ ಹಿಡಿ ಯುವುದಾಗಿ ಈಗಾಗಲೇ ಅರಣ್ಯ ಅಧಿ ಕಾರಿಗಳು ಭರವಸೆ ನೀಡಿದ್ದರು. ಅಷ್ಟ ರೊಳಗೆ ಹುಲಿಯ ಸೆರೆ ಹಿಡಿದು, ಜನರಲ್ಲಿ ಕೊಂಚ ನೆಮ್ಮದಿ ತಂದಿದ್ದಾರೆ. ಚೂರಿಕಾಡು ಗ್ರಾಮದ ನೆಲ್ಲೀರ ಪೂಣಚ್ಚ ಎಂಬುವರ ತೋಟದಲ್ಲಿ ಕಳೆದ ಭಾನು ವಾರ ಸಂಜೆ ಚೇತನ್(18) ಹಾಗೂ ಮರು ದಿನ ಬೆಳಗ್ಗೆ ಆತನ ತಾತ ರಾಜು(60) ಹುಲಿ…
ಕುಟ್ಟ ಬಳಿ ಭಾನುವಾರ ಬಾಲಕನ ಬಲಿ ಪಡೆದ ಹುಲಿ ಸೋಮವಾರ ಅವನ ತಾತನನ್ನೂ ಕೊಂದು ಹಾಕಿತು!
February 14, 2023ಗೋಣಿಕೊಪ್ಪ, ಫೆ.13- ಪೊನ್ನಂಪೇಟೆ ತಾಲೂಕು ಕುಟ್ಟಾ ಸಮೀಪದ ಪಲ್ಲೇರಿ ಬಳಿ ತೋಟದಲ್ಲಿ ಭಾನುವಾರ ಸಂಜೆ ಬಾಲಕನನ್ನು ಬಲಿ ಪಡೆದಿದ್ದ ಹುಲಿ, ಇಂದು ಬೆಳಗ್ಗೆ ಆತನ ತಾತನನ್ನೂ ಬಲಿ ಪಡೆದಿದೆ. ತಮ್ಮ ಕುಟುಂಬದ ಇಬ್ಬರ ಸಾವಿನಿಂದ ಅಘಾತಕ್ಕೊಳಗಾದ ಬಾಲಕನ ಅಜ್ಜಿಯೂ ಸಾವಿಗೀಡಾಗಿದ್ದಾರೆ. ಭಾನುವಾರ ಸಂಜೆ 4 ಗಂಟೆ ಸುಮಾ ರಿನಲ್ಲಿ ಚೂರಿಕಾಡು ಗ್ರಾಮದ ನೆಲ್ಲೀರ ಪೂಣಚ್ಚ ಎಂಬುವರ ತೋಟದಲ್ಲಿ ಆಡವಾಡುತ್ತಿದ್ದ ಬಾಲಕ ಚೇತನ್ (18) ಮೇಲೆ ದಾಳಿ ಮಾಡಿದ ಹುಲಿ, ದೇಹ ಕಚ್ಚಿಕೊಂಡು ಹೋಗಿ ಒಂದು ಭಾಗವನ್ನು ತಿಂದು…
ಯುವತಿ ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಹಂತಕನ ಮೃತದೇಹ ಪತ್ತೆ
January 19, 2023ಮಡಿಕೇರಿ, ಜ.18- ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಭಾನು ವಾರ (ಜ.15) ಸಂಜೆ ನಡೆದಿದ್ದ ಬುಟ್ಟಿ ಯಂಡ ಆರತಿ(24) ಕೊಲೆ ಪ್ರಕರಣದ ಆರೋಪಿ ಕೆ.ತಿಮ್ಮಯ್ಯ(33) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತ ದೇಹ ರುದ್ರುಗುಪ್ಪೆ ಗ್ರಾಮದ ಕೆರೆ ಯೊಂದರಲ್ಲಿ ಪತ್ತೆಯಾಗಿದೆ. ಆರೋಪಿ ತಿಮ್ಮಯ್ಯನ ಮೃತದೇಹ ಬುಧವಾರ ಮುಂಜಾನೆ 2 ಗಂಟೆಯ ವೇಳೆಗೆ 40 ಅಡಿ ಆಳದಲ್ಲಿ ಪತ್ತೆಯಾಗಿದ್ದು, ಮುಳುಗು ತಜ್ಞರು ದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಸ್ಥಳದಲ್ಲಿ ಮಹಜರು ನಡೆಸಿ ವಿರಾಜ ಪೇಟೆ ಸರಕಾರಿ ಆಸ್ಪತ್ರೆಗೆ ಮೃತದೇಹ…
ಸುಂಟಿಕೊಪ್ಪ ಬಳಿ ಕಾರ್ಯಾಚರಣೆ ವೇಳೆ ದುರಂತ ಸೆರೆಸಿಕ್ಕ ಕಾಡಾನೆ ಸಾವು
January 14, 2023ಮಡಿಕೇರಿ, ಜ.13- ಕಾರ್ಯಾಚರಣೆ ವೇಳೆ ಸೆರೆ ಸಿಕ್ಕಿದ್ದ ಕಾಡಾನೆಯೊಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಸಲಗ 20 ವರ್ಷ ಪ್ರಾಯದ್ದಾಗಿರ ಬಹುದು ಎಂದು ಅಂದಾಜಿಸಲಾಗಿದೆ. ಅತ್ತೂರು ನಲ್ಲೂರು ಗ್ರಾಮದ ಕೃಷಿ ಪ್ರದೇಶಗಳಿಗೆ ದಾಳಿಯಿಟ್ಟು, ಕೃಷಿ ಫಸಲು ಧ್ವಂಸಗೊಳಿಸಿ, ಕೃಷಿಕರ ನಿದ್ದೆಗೆಡಿ ಸಿದ್ದ ಹಾಗೂ ಜನರನ್ನು ಕಂಡಲ್ಲಿ ದಾಳಿಗೆ ಮುಂದಾಗುತ್ತಿದ್ದ ಕಾಡಾನೆ ಕಾರ್ಯಾಚರಣೆ ಯಲ್ಲಿ ಸೆರೆಸಿಕ್ಕಿದ ಬಳಿಕ ಸಾವನ್ನಪ್ಪಿದೆ. ಸಾಕಾನೆಗಳಿಂದ ಕಾರ್ಯಾಚರಣೆ: ಮೋದೂರು, ಅತ್ತೂರು ನಲ್ಲೂರಿನ ಕಾಫಿ ತೋಟಗಳಲ್ಲಿ…
ದೇವಾಲಯಗಳ ಗಂಟೆ ಕಳವು: ನಾಲ್ವರು ಕಳ್ಳರ ಬಂಧನ
January 11, 2023ಮಡಿಕೇರಿ, ಜ.10- ಕೊಡಗಿನ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಗಂಟೆ ಕಳವು ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರ ವಿಶೇಷ ತಂಡ, ನಾಲ್ವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ಕೆಸರೆ ನಿವಾಸಿಗಳಾದ ಅಮ್ಜದ್ ಅಹಮದ್(37), ಸಮೀವುಲ್ಲಾ ಅಲಿಯಾಸ್ ಸಮಿ(22), ಜುಲ್ಫೀಕರ್ ಅಲಿಯಾಸ್ ಜುಲ್ಲು(36) ಮತ್ತು ಹೈದರ್(36) ಬಂಧಿತ ಆರೋಪಿಗಳು. ಇವರಿಂದ 10 ಲಕ್ಷ ರೂ. ಮೌಲ್ಯದ 750 ಕೆ.ಜಿ. ತೂಕದ ವಿವಿಧ ಮಾದರಿ ಲೋಹದ ಗಂಟೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆ ಯಲಾಗಿದೆ…
ವಿಶ್ವ ದಾಖಲೆ ನಿರ್ಮಾಣದ ಕೊಡವ ಕುಟುಂಬಗಳ ಬೃಹತ್ ಸಮ್ಮಿಲನ
December 27, 2022ವಿರಾಜಪೇಟೆ/ಮಡಿಕೇರಿ, ಡಿ.26- ಅಲ್ಲಿ ಸಾವಿರಾರು ಮಂದಿ ಕೊಡವರು ಸೇರಿದ್ದರು. ಅವರ ಸಂಪ್ರದಾಯ ಮೇಳೈ ಸಿತ್ತು. ಎಲ್ಲಿ ನೋಡಿದರೂ ಕೊಡವರೇ. ಈ ಸಮ್ಮಿಲನ ಗಿನ್ನಿಸ್ ದಾಖಲೆ ಸ್ಥಾಪಿಸುವುದಾಗಿತ್ತು. ಇತ್ತೀಚೆಗೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ‘ಕೂರ್ಗ್ ಎತ್ನಿಕ್’ ಕಾರ್ಯ ಕ್ರಮದಲ್ಲಿ ಎಲ್ಲಾ ಕುಟುಂಬಗಳ 6 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಈ ಹಿಂದಿನ ಗಿನ್ನಿಸ್ ದಾಖಲೆಯನ್ನು ಮುರಿದು, ಹೊಸ ದಾಖಲೆ ನಿರ್ಮಿಸಲು ಮುಂದಾಗಿದ್ದರು. ಇದು ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮವಾಗಿತ್ತು. ಕೊಡವರ ಎಲ್ಲಾ ಒಕ್ಕಗಳ ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿ ಛಿಟಚಿಟಿ.ಛಿom…
ಕೋವಿ ಹಿಡಿದು ಕೊಡವರ ಮೆರವಣಿಗೆ
December 18, 2022ಮಡಿಕೇರಿ,ಡಿ.17- ಕೊಡವ ಮಹಿಳೆಯ ರಿಗೆ ಭದ್ರತೆ ಹಿನ್ನೆಲೆಯಲ್ಲಿ ಬಂದೂಕು ತರ ಬೇತಿಯನ್ನು ಕಡ್ಡಾಯವಾಗಿ ಸರ್ಕಾರದ ವತಿಯಿಂದ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಆಗ್ರಹಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದ ಅಜ್ಜಮಾಡ ಕುಟುಂಬದ ಐನ್ಮನೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅಧ್ಯಕ್ಷತೆಯಲ್ಲಿ 13ನೇ ವರ್ಷದ ಕೋವಿ ನಮ್ಮೆ ಆಯೋಜಿಸಲಾಗಿತ್ತು. ಕೋವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಗಾಳಿ ಯಲ್ಲಿ ಗುಂಡು ಹಾರಿಸಿ, ಅಜ್ಜಮಾಡ ಐನ್ಮನೆ ವ್ಯಾಪ್ತಿಯಲ್ಲಿ ಕೋವಿ…