ಕೊಡಗು

ಸಿಎನ್‍ಸಿಯಿಂದ ಸಂಭ್ರಮದ ಪುತ್ತರಿ ನಮ್ಮೆ
ಕೊಡಗು

ಸಿಎನ್‍ಸಿಯಿಂದ ಸಂಭ್ರಮದ ಪುತ್ತರಿ ನಮ್ಮೆ

December 10, 2022

ಮಡಿಕೇರಿ, ಡಿ.9- ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ಪುತ್ತರಿ ನಮ್ಮೆಯನ್ನು ದಕ್ಷಿಣ ಕೊಡಗಿನ ಬಿರುನಾಣಿಯ ತೆರಾಲು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಬೊಟ್ಟಂಗಡ ಗಿರೀಶ್ ಹಾಗೂ ಸವಿತಾ ಗಿರೀಶ್ ದಂಪತಿ ಭತ್ತದ ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ದು ಮನೆಗೆ ತರಲಾಯಿತು. ಗುರು, ಹಿರಿಯರು ಹಾಗೂ ಪ್ರಕೃತಿಗೆ ಪ್ರಾರ್ಥನೆ ಸಲ್ಲಿಸಿದ ನಾಚಪ್ಪ ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಸಾಂಪ್ರದಾಯಿಕ ಹಬ್ಬ, ಆಚಾರ, ವಿಚಾರಗಳನ್ನು ಇಡೀ ವಿಶ್ವಕ್ಕೆ ತಿಳಿಸಬೇಕೆನ್ನುವ ಉದ್ದೇಶದಿಂದ…

ಜ.20ರಿಂದ ಅಮ್ಮತ್ತಿಯಲ್ಲಿಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ
ಕೊಡಗು

ಜ.20ರಿಂದ ಅಮ್ಮತ್ತಿಯಲ್ಲಿಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ

December 10, 2022

ಮಡಿಕೇರಿ, ಡಿ.9- ಮಿಲನ್ಸ್ ಕ್ಲಬ್, ಕರ್ನಾಟಕ ರಾಜ್ಯ ಫÀÅಟ್ಬಾಲ್ ಸಂಸ್ಥೆ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಜ.20ರಿಂದ 29ರವರೆಗೆ ಇದೇ ಪ್ರಥಮ ಬಾರಿಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ‘ಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ’ ಆಯೋಜಿಸಲಾಗಿದೆ. ಅಮ್ಮತ್ತಿ ಮಿಲನ್ಸ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಜಂಟಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಮುಖರು ಮಾತನಾಡಿ, ರಾಜಸ್ಥಾನ, ಗೋವಾ, ಕೇರಳ, ತಮಿಳು ನಾಡು, ಬೆಂಗಳೂರು, ಆರ್ಮಿ ತಂಡ ಸೇರಿದಂತೆ ನೋಂದಾಯಿತ 16…

ಕುಶಾಲನಗರದಲ್ಲಿ ಸಂಭ್ರಮದ ಪುತ್ತರಿ ನಮ್ಮೆಆಚರಣೆ
Uncategorized, ಕೊಡಗು

ಕುಶಾಲನಗರದಲ್ಲಿ ಸಂಭ್ರಮದ ಪುತ್ತರಿ ನಮ್ಮೆಆಚರಣೆ

December 9, 2022

ಕುಶಾಲನಗರ, ಡಿ.8- ಪಟ್ಟಣದ ಕೊಡವ ಸಮಾಜದ ವತಿಯಿಂದ ಬುಧವಾರ ರಾತ್ರಿ ಪುತ್ತರಿ ನಮ್ಮೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದಲ್ಲಿ ನೆಲೆಸಿರುವ ಕೊಡವ ಬಾಂಧವರು ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಸಮಾಜದಲ್ಲಿ ರಾತ್ರಿ 7.30ಕ್ಕೆ ಸೇರಿದರು. ಮೊದಲಿಗೆ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸಲಾಯಿತು. ನಂತರ ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ಮೂಲಕ ವಿಧಿವಿಧಾನ ನೆರವೇರಿಸಿದರು. ನಂತರ ಸಿದ್ಧಪಡಿಸಿದ ಕುತ್ತಿಯನ್ನು ತೋಕ್ ಕತ್ತಿ, ದುಡಿಕೊಟ್ಟ್ ಪಾಟ್…

ಹಳೆ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ವ್ಯಾನಿಟಿ ಬ್ಯಾಗ್ ಕದ್ದ ಯುವಕ ಕಾವೇರಿ ನದಿಗೆ ಹಾರಿದರೂ ಬೆನ್ನತ್ತಿ ಹಿಡಿದ ಜನ!
ಕೊಡಗು

ಹಳೆ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ವ್ಯಾನಿಟಿ ಬ್ಯಾಗ್ ಕದ್ದ ಯುವಕ ಕಾವೇರಿ ನದಿಗೆ ಹಾರಿದರೂ ಬೆನ್ನತ್ತಿ ಹಿಡಿದ ಜನ!

December 7, 2022

ವಿರಾಜಪೇಟೆ, ಡಿ.6- ಹಳೆ ವಿದ್ಯಾರ್ಥಿ ಸೋಗಿನಲ್ಲಿ ವರ್ಗಾವಣೆ ಪತ್ರ (ಟಿಸಿ) ಕೇಳುವ ನೆಪದಲ್ಲಿ ಶಾಲೆಗೆ ಬಂದು ಶಿಕ್ಷಕಿಯರಿಬ್ಬರ ಹಣ, ಬೆಳ್ಳಿ ಬ್ರೇಸ್‍ಲೇಟ್ ಮತ್ತು ಎಟಿಎಂ ಕಾರ್ಡ್ ಇದ್ದ ವ್ಯಾನಿಟಿ ಬ್ಯಾಗ್ ಕದ್ದು, ಕಾವೇರಿ ನದಿಗೆ ಹಾರಿ ಈಜಿ ಪರಾರಿಯಾಗಲೆತ್ನಿಸಿದರೂ ಬಿಡದೆ ಹಳೆ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ಘಟನೆ ತಾಲೂಕಿನ ಬೇತ್ರಿ ಗ್ರಾಮದ ಬಳಿ ನಡೆದಿದೆ. ಮೂರ್ನಾಡು ವಾಸಿ ಶಿವಕುಮಾರ್ ಹಳೇ ವಿದ್ಯಾರ್ಥಿ ಸೋಗಿನಲ್ಲಿ ಶಿಕ್ಷಕಿಯರ ಬ್ಯಾಗ್ ಕಳ್ಳತನ ಮಾಡಿ, ಪೊಲೀಸರ ಅತಿಥಿಯಾದವನು. ತಾಲೂಕಿನ ಕಾಕೋಟು…

ಮಾ.20ರಿಂದ ಕೊಡವ ಕೌಟುಂಬಿಕ ಅಪ್ಪಚಟ್ಟೋಳಂಡ ಹಾಕಿ ಉತ್ಸವ
ಕೊಡಗು

ಮಾ.20ರಿಂದ ಕೊಡವ ಕೌಟುಂಬಿಕ ಅಪ್ಪಚಟ್ಟೋಳಂಡ ಹಾಕಿ ಉತ್ಸವ

December 7, 2022

ಮಡಿಕೇರಿ, ಡಿ.6- ಸುದೀರ್ಘ 4 ವರ್ಷಗಳ ಬಳಿಕ ಇದೀಗ 23ನೇ ಕೊಡವ ಕೌಟುಂಬಿಕ `ಅಪ್ಪಚೆಟ್ಟೋಳಂಡ ಹಾಕಿ ಉತ್ಸವ-2023′ ನಾಪೋಕ್ಲುವಿನಲ್ಲಿ ಮಾರ್ಚ್ 20ರಿಂದ ಏಪ್ರಿಲ್ 10ರವರೆಗೆ ನಡೆಯಲಿದೆ ಎಂದು ಉತ್ಸವ ಆಯೋಜಕ ಸಮಿತಿಯ ಅಧ್ಯಕ್ಷ ಅಪ್ಪಚೆÀಟ್ಟೋ ಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಮುತ್ತಪ್ಪ, ಪ್ರಾಕೃತಿಕ ವಿಕೋಪ, ಕೊರೊನಾ ಹಿನ್ನೆಲೆಯಲ್ಲಿ ಯುವ ಸಮೂಹದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜನೆಗೊಂಡಿ ರಲಿಲ್ಲ. ಇದೀಗ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಪ್ಪಚೆÀಟ್ಟೋಳಂಡ…

ಡಿ.10, 11ಕ್ಕೆಕೊಡಗು ಕಾಫಿ ಉತ್ಸವ
ಕೊಡಗು

ಡಿ.10, 11ಕ್ಕೆಕೊಡಗು ಕಾಫಿ ಉತ್ಸವ

December 6, 2022

ಮಡಿಕೇರಿ, ಡಿ.5- ಪಶ್ಚಿಮಘಟ್ಟ ಸಾಲಿನ ಕೊಡಗಿನ ಸ್ವಾದಭರಿತ ವೈಶಿಷ್ಟ್ಯ ಪೂರ್ಣವಾದ ಕಾಫಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಮತ್ತು ಆಂತರಿಕ ಕಾಫಿ ಮಾರುಕಟ್ಟೆಯನ್ನು ಬಲಪಡಿಸುವ ಪ್ರಮುಖ ಉದ್ದೇಶದಿಂದ ಡಿ.10ಮತ್ತು 11ರಂದು ರಾಜಾಸೀಟಿನಲ್ಲಿ `ಕೊಡಗು ಕಾಫಿ ಉತ್ಸವ-2022′ ಅನ್ನು ಆಯೋ ಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ. ನಗರದ ಕಾಫಿ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಜಿಲ್ಲಾಡಳಿತ, ಕಾಫಿ ಮಂಡಳಿ…

ರಾಷ್ಟç ಮಟ್ಟಕ್ಕೆ ಆಯ್ಕೆ
ಕೊಡಗು

ರಾಷ್ಟç ಮಟ್ಟಕ್ಕೆ ಆಯ್ಕೆ

November 27, 2022

ಮಡಿಕೇರಿ,ನ.೨೬- ಮಡಿಕೇರಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ವಿಭಾಗದ ೧೪ ವರ್ಷದ ಬಾಲಕಿಯರ ಹಾಕಿ ಪಂದ್ಯಾವಳಿ ಯಲ್ಲಿ ಬೆಳಗಾವಿ ತಂಡವನ್ನು ೪-೦ ಗೋಲುಗಳಿಂದ ಸೋಲಿಸುವ ಮೂಲಕ ಕೊಡಗು ತಂಡದ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ೬ನೇ ತರಗತಿಯ ನೇನಾ ಕರುಂಬಯ್ಯ ಹಾಗೂ ೭ನೇ ತರಗತಿಯ ಜಾಗೃತಿ ಕರುಂಬಯ್ಯ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನೆಮ್ಮಲೆ ಗ್ರಾಮದ ಚಟ್ಟಂಗಡ ರಂಜು ಕರುಂಬಯ್ಯ ಹಾಗೂ ರಶ್ಮಿ ಕರುಂಬಯ್ಯ ದಂಪತಿ ಪುತ್ರಿಯರಾಗಿದ್ದಾರೆ.

ಅರೆಸೇನಾ ಪಡೆ, ಮಾಜಿ ಯೋಧರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಡಿ.13, ಬೆಂಗಳೂರು ಚಲೋ
ಕೊಡಗು

ಅರೆಸೇನಾ ಪಡೆ, ಮಾಜಿ ಯೋಧರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಡಿ.13, ಬೆಂಗಳೂರು ಚಲೋ

November 23, 2022

ಮಡಿಕೇರಿ, ನ.22- ಅರೆಸೇನಾಪಡೆ ಯೋಧರು ಹಾಗೂ ಮಾಜಿ ಯೋಧರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಅರೆ ಸೇನಾಪಡೆ ನಿವೃತ್ತ ಯೋಧರ ಒಕ್ಕೂಟ, ಡಿ.13ರಂದು `ಬೆಂಗಳೂರು ಚಲೋ’ ಹೋರಾಟದ ಮೂಲಕ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ಸರ್ಕಾರದ ನಿರ್ಲಕ್ಷ್ಯ ಧೋರಣೆ ಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು. 2001ರ ಡಿ.13ರಂದು ಸಂಸತ್…

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‍ನಲ್ಲಿ ಗ್ರಾಪಂ ನೌಕರರ ಭಾರೀ ಪ್ರತಿಭಟನೆ
ಕೊಡಗು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‍ನಲ್ಲಿ ಗ್ರಾಪಂ ನೌಕರರ ಭಾರೀ ಪ್ರತಿಭಟನೆ

November 17, 2022

ಮಡಿಕೇರಿ,ನ.16- ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ, ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸರ್ಕಾರ ಕನಿಷ್ಠ ವೇತನ ನೀಡದೆ ವಂಚಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಗ್ರಾಪಂ ನೌಕರರ ಸಂಘದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ ತಿಂಗಳಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲು ನಿರ್ಧಾರ ಕೈಗೊಳ್ಳಲಾಯಿತು. ಗ್ರಾಪಂ ನೌಕರರಿಗೆ…

ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ ವಿರಾಜಪೇಟೆ ಶಾಸಕರಿಂದ ಧಮ್‍ಕಿ
ಕೊಡಗು

ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ ವಿರಾಜಪೇಟೆ ಶಾಸಕರಿಂದ ಧಮ್‍ಕಿ

November 17, 2022

ಶ್ರೀಮಂಗಲ, ನ.16- ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕಾಗಿದೆ. ಆದರೆ ಕೊಡಗಿನಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆಯ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೇಳಿದರೆ ಧಮಕಿ ಹಾಕಲಾಗುತ್ತಿದ್ದು, ಭಯದ ನೆರಳಿನಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್’ ಮಾಡ ರಾಜೀವ್ ಬೋಪಯ್ಯ ಮತ್ತು ಕೊಡಗು ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ತಿಳಿಸಿದ್ದಾರೆ. ಪೆÇನ್ನಂಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ…

1 2 3 4 187
Translate »