ಮಡಿಕೇರಿ, ಅ. 26- ಮಡಿಕೇರಿ ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಶಮಂಟಪಗಳ ಶೋಭಾಯಾತ್ರೆ ಅತ್ಯಂತ ಸರಳವಾಗಿ ನಡೆಯಿತು. ಮೈಸೂರು ದಸರಾಗೆ ಜಂಬೂಸವಾರಿ ಕಳಸಪ್ರಾಯ ವಾಗಿದ್ದರೆ, ಮಡಿಕೇರಿ ದಸರಾಗೆ ವರ್ಣರಂಜಿತ ದಶಮಂಟ ಪಗಳ ಶೋಭಾಯಾತ್ರೆ ಮೆರಗು ನೀಡುತ್ತಿತ್ತು. 10 ದೇವಾಲಯಗಳ ಮಂಟಪಗಳನ್ನು ಅತ್ಯಂತ ಆಕರ್ಷಣೀಯವಾಗಿ ಸಿದ್ಧಗೊಳಿಸ ಲಾಗುತ್ತಿತ್ತು. ಅದಕ್ಕಾಗಿ ತಮಿಳುನಾಡಿನ ಕಲಾವಿದರನ್ನು ಕರೆತರಲಾಗುತ್ತಿತ್ತು. ದಶ ಮಂಟಪಗಳ ಮಧ್ಯೆ ಸ್ಪರ್ಧೆಯನ್ನೇ ರ್ಪಡಿಸಿ, ಬಹುಮಾನ ವಿತರಿಸಲಾಗುತ್ತಿತ್ತು. ದಶಮಂಟಪಗಳ ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿ ಸುತ್ತಿದ್ದರು. ಅನೇಕರು…
ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ-ಪಂಗಡದ ಹಿತರಕ್ಷಣಾ ಸಮಿತಿ ಸಭೆ
October 27, 2020ಮೂಲ ಸೌಕರ್ಯಕ್ಕೆ ಸಮಿತಿ ಸದಸ್ಯರ ಆಗ್ರಹ ಸೋಮವಾರಪೇಟೆ, ಅ.26-ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹ ಸೀಲ್ದಾರ್ ಗೋವಿಂದರಾಜು ಅಧ್ಯಕ್ಷತೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಇಂದಿಗೂ ತಮ್ಮ ಕೃಷಿ ಭೂಮಿಗೆ ಸೂಕ್ತ ದಾಖಲಾತಿ ಹೊಂದಿಲ್ಲದ ಕಾರಣ, ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸದಸ್ಯ ಸುಬ್ರಮಣಿ ಸಭೆಯ ಆರಂಭದಲ್ಲೇ ದೂರಿದರು. ಕೂಡಲೇ ದಾಖಲಾತಿ ದುರಸ್ತಿ ಮಾಡಿಕೊಡುವ…
ಕೌಟುಂಬಿಕ ಕಲಹ: ವ್ಯಕ್ತಿ ಆತ್ಮಹತ್ಯೆ
October 27, 2020ವಿರಾಜಪೇಟೆ,ಅ.26-ಕೌಟುಂಬಿಕ ಕಲಹದಿಂದ ಕೂಲಿ ಕಾರ್ಮಿಕನೋರ್ವ ನೇಣಿಗೆ ಶರಣಾಗಿರುವ ಘಟನೆ ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿ ನಡೆದಿದೆ. ಬೆಟ್ಟದ ನಿವಾಸಿ ಮಂಜು(36) ನೇಣಿಗೆ ಶರಣಾದವರು. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆÉ. ಭಾನುವಾರ ಸ್ನೇಹಿತ ರೊಂದಿಗೆ ಮದ್ಯ ಸೇವೆಸಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಯೊಂದಿಗೆ ಗಲಾಟೆ ನಡೆದಿದೆ ಎನ್ನಲಾಗಿದೆ. ತಡರಾತ್ರಿ ಮನೆಯ ಕೊಣೆಯೊಂದರಲ್ಲಿ ನೇಣಿಗೆ ಶರಣಾಗಿ, ಅಸ್ವಸ್ಥರಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ಕೆ.ಮಮತಾ ನಗರ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತಾಲೂಕು…
ಹೊಳೆಯಲ್ಲಿ ಮುಳುಗಿ ಬಾಲಕ ಸೇರಿ ಇಬ್ಬರು ಸಾವು
October 27, 2020ಸೋಮವಾರಪೇಟೆ, ಅ.26-ಕಾಲು ತೊಳೆಯಲೆಂದು ನದಿ ನೀರಿಗೆ ಇಳಿದು ಕಾಲು ಜಾರಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಚಿಕ್ಕಪ್ಪ ಕೂಡ ನೀರುಪಾಲಾಗಿರುವ ಧಾರಣ ಘಟನೆ ತಾಲೂಕಿನ ಮಾದಾಪುರದಲ್ಲಿ ಭಾನುವಾರ ನಡೆದಿದೆ. ಮಡಿಕೇರಿ ಲಯನ್ಸ್ ಕ್ಲಬ್ ನಿರ್ದೇಶಕ ಬಾಚಿನಾಡಂಡ ಮಧು ನಂಜಪ್ಪ(48) ಹಾಗೂ ಅವರ ಅಣ್ಣನ ಪುತ್ರ ನಿರೋಶ್ ನಾಚಪ್ಪ(11) ಸಾವನ್ನಪ್ಪಿದವರು. ಮೂಲತ ತಾಲೂಕಿನ ಮಾದಾಪುರ ಸಮೀಪದ ಬಿಳಿಗೇರಿಯವರಾದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬಾಚಿನಾಡಂಡ ಮೊಣ್ಣಪ್ಪ ಮತ್ತು ಅವರ ಕುಟುಂಬದ 15 ಮಂದಿ ತಮ್ಮ ತೋಟದ ಮನೆಗೆ ಬಂದಿದ್ದರು. ಭಾನುವಾರ…
ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆ
October 27, 2020ಮಡಿಕೇರಿ,ಅ.26-ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ. ಕೇರಳ ಮತ್ತು ಹರ್ಯಾಣ ಹೈ ಕೋರ್ಟ್ ಆದೇಶದಂತೆ, ಭಾರತ ಸರ್ಕಾರ ಕ್ರೀಡಾ ಮಂತ್ರಾಲಯ ಮತ್ತು ಇಂಡಿಯನ್ ಒಲಪಿಂಕ್ ಅಸೋಶಿಯೇಷನ್ ಜಂಟಿ ಆಶ್ರಯ ದೊಂದಿಗೆ ಅಸ್ಸಾಂ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಪಿ.ಬೋರ್ಕೋಟಗಿ ಅವರ ಸಮ್ಮುಖದಲ್ಲಿ ಅಸ್ಸಾಂ ರಾಜ್ಯದ ಗೌಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಕರಾಟೆ ರಾಷ್ಟ್ರೀಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ ಕರಾಟೆಪಟು ಅರುಣ್ ಮಾಚಯ್ಯರನ್ನು ಆಯ್ಕೆ ಮಾಡಲಾಯಿತು. 1977ರಲ್ಲಿ ಪ್ರಥಮ ರಾಷ್ಟ್ರೀಯ ಕರಾಟೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಅರುಣ್…
ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ
October 27, 2020ಮಡಿಕೇರಿ, ಅ.26- ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇ ರಿಸಿದರು. ಬಳಿಕ ಮಾತನಾಡಿದ ಅವರು, 96 ಲಕ್ಷ ರೂ. ವೆಚ್ಚದಲ್ಲಿ 6 ಕೊಠಡಿ ಒಳ ಗೊಂಡ ಸುಸಜ್ಜಿತ ಕಟ್ಟಡ ನಿರ್ಮಾಣ ವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮಾಡಲಾಗಿದೆ. ನೂತನ ಕಟ್ಟಡ…
ವಿಜಯದಶಮಿ ಸ್ತ್ರೀ ಕುಲಕ್ಕೆ ಗೌರವದ ಸಂಕೇತ
October 27, 2020ವಿರಾಜಪೇಟೆ,ಆ.26-ಭಾರತ ಖಂಡ ಹಬ್ಬಗಳ ಆಚರಣೆಯಲ್ಲಿ ಶ್ರೇಷ್ಟತೆ ಹೊಂದಿದ್ದು, ಶತ್ರು ಸಂಹಾರಿಣಿÀ ಚಾಮುಂಡೇಶ್ವರಿಯನ್ನು ಸ್ತೂತಿಸುವುದೇ ವಿಜಯದಶಮಿ ವಿಶೇಷ. ಈ ಹಬ್ಬ ಸ್ತ್ರೀ ಕುಲಕ್ಕೆ ಗೌರವದ ಸಂಕೇತ ಎಂದು ತಾಲೂಕು ವಿದ್ಯಾರ್ಥಿ ಪ್ರಮುಖ್ ಸುಬ್ರಮಣಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ವಿರಾಜಪೇಟೆ ನಗರ ಶಾಖೆ ಯಿಂದ ನಗರದ ದೇವಾಂಗ ಬೀದಿಯ ಚಾಮುಂಡಿ ಶಾಖೆಯಲ್ಲಿ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಖಂಡವು ಮಹಿಳೆಯನ್ನು ಪೂಜ ನೀಯ ಭಾವದಿಂದ ಆರಾಧಿಸಿ ಕೊಂಡು ಬರುತ್ತಿದೆ. ಸಾವಿರಾರು ವರ್ಷಗಳ ಸುಸಂಸ್ಕøತ ಸಂಸ್ಕøತಿ…
ಶಕ್ತಿ ದೇವತೆಗಳ ಕರಗ ನಗರ ಸಂಚಾರಕ್ಕೆ ನಿರ್ಬಂಧ ಸಲ್ಲದು
October 22, 2020ಮಡಿಕೇರಿ, ಅ.21- ಮಡಿಕೇರಿ ನಗರದ ಐತಿಹಾಸಿಕ ನಾಲ್ಕು ಶಕ್ತಿ ದೇವತೆಗಳ ದಸರಾ ಕರಗಗಳ ನಗರ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿ ಯಾದ ಕ್ರಮವಲ್ಲ ವೆಂದು ಅಸಮಾ ಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ನವರಾತ್ರಿಯ ಕೊನೆಯ ಮೂರು ದಿನಗಳಾದರು ಕರಗ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ಎಲ್ಲಾ ನಿಯಮಗಳನ್ನು ಹೇರಿಕೆ ಮಾಡು ತ್ತಿರುವುದು ಖಂಡನೀಯ. ತಲಕಾವೇರಿ…
ತಿತಿಮತಿಯಲ್ಲಿ ನಿತ್ಯೋತ್ಸವ ಕಾರ್ಯಕ್ರಮ
October 22, 2020ಗೋಣಿಕೊಪ್ಪ, ಅ.21- ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛಭಾರತ ಮಿಷನ್, ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋತ್ಸವ ಮಾಸಿಕ ಆಚರಣೆ ಮಂಗಳ ವಾರ ನಡೆಯಿತು. ಗರ್ಭಿಣಿ, ಬಾಣಂತಿ ಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಾತೃಪೂರ್ಣ ಯೋಜನೆಯನ್ನು ಪಡೆದುಕೊಂಡು, ಆರೋಗ್ಯ ಇಲಾಖೆಯ ಹಲವು ಯೋಜನೆ ಗಳನ್ನು ಬಳಸಿಕೊಳ್ಳಲು ಸಲಹೆ ನೀಡ ಲಾಯಿತು. ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಹೊಸಮನಿ ಅವರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು. ಸ್ವಚ್ಛ ಭಾರತ…
ಓಡಿಪಿ ಸಂಸ್ಥೆಯಿಂದ ರೈತರಿಗೆ ಉಚಿತ ಗೊಬ್ಬರ ವಿತರಣೆ
October 22, 2020ಸಿದ್ದಾಪುರ, ಅ.21- ಕೋವಿಡ್ ಸಮಸ್ಯೆಯಿಂದರೈತರು ಹಲವು ಸಮಸ್ಯೆ ಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಅಭಿವೃದ್ಧಿಯ ಮೂಲಕ ಮುಂದೆ ಬರಲು ಓಡಿಪಿ ಸಂಸ್ಥೆ ಮೈಸೂರು ಹಾಗೂ ಜರ್ಮನಿಯ ಅಂದೇರಿ ಹಿಲ್ಪೆ ಸಂಸ್ಥೆ ಸಹಕಾರದೊಂದಿಗೆ ಸಿದ್ದಾಪುರ, ಮಾಲ್ದಾರೆ, ನೆಲ್ಯಹುದಿಕೇರಿ ಭಾಗದ ಓಡಿಪಿ ಸಂಸ್ಥೆಯ ನೊಂದಾಯಿತ 83 ಫಲಾನು ಭವಿಗಳಿಗಳಾದ ಸಣ್ಣ ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡಲಾಯಿತು. ಚರ್ಚ್ ಹಾಲ್ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಪಂಚಾ ಯಿತಿ ಸದಸ್ಯೆ ಚಿನ್ನಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಪಂಚಾ…