ಎ.ಎಸ್.ಪ್ರದೀಪ್ ನೇಮಕ

ಚಾಮರಾಜನಗರ: ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಎ.ಎಸ್. ಪ್ರದೀಪ್ ಅವರನ್ನು ನೇಮಕ ಮಾಡಿ ಸಮಿ ತಿಯ ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅಸಂಘಟಿತ ಕಾರ್ಮಿ ಕರನ್ನು ಒಗ್ಗೂಡಿಸಿ, ಸಂಘಟಿಸಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕೆ ಶ್ರಮಿಸುವಂತೆ ಆದೇಶದಲ್ಲಿ ರಾಜ್ಯಾಧ್ಯಕ್ಷ ಡಾ.ಶಾಂತ ವೀರನಾಯ್ಕ ತಿಳಿಸಿದ್ದಾರೆ. ಸಮಿತಿಯ ರಾಜ್ಯ ಕಾರ್ಯದರ್ಶಿ ಹುದ್ದೆಯ ಜೊತೆಗೆ ಅಸಂಘಟಿತ ಕಾರ್ಮಿಕರ ವಿಭಾಗದ ಮೈಸೂರು ಜಿಲ್ಲೆಯ ಸಂಘಟನೆಯ ಉಸ್ತುವಾರಿಯನ್ನು ಎ.ಎಸ್. ಪ್ರದೀಪ್ ಅವರಿಗೆ ವಹಿಸಲಾಗಿದೆ.