ಲೆಕ್ಕ ಸಹಾಯಕ ಅಮಾನತು

ಚಾಮರಾಜನಗರ: ಚಾಮರಾಜನಗರ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಕೆ.ಕೃಷ್ಣನಾಯಕ್ ಅವರನ್ನು ಅಮಾನತು ಮಾಡಿ ಜಿಪಂ ಸಿಇಓ ಡಾ.ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕಳೆದ ಏ.9ರಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಕಚೇರಿಗೆ ದಾಳಿ ಮಾಡಿದ ವೇಳೆ ಕೆ.ಕೃಷ್ಣನಾಯಕ್ ಅವರ ಬಳಿ ಹೆಚ್ಚುವರಿ ಅಕ್ರಮ ಹಣ ಇದ್ದು ಇದನ್ನು ವಶಪಡಿಸಿಕೊಂಡು, ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.