ದ್ವಿತೀಯ ಪಿಯುಸಿ ಪರೀಕ್ಷೆಗೆ  ಶೇ.75ರಷ್ಟು ಹಾಜರಾತಿ ಕಡ್ಡಾಯವಿಲ್ಲ

ಬೆಂಗಳೂರು, ಜ.24-ಈ ವರ್ಷ ಪರೀಕ್ಷೆಗಳಿಗೆ ಹಾಜರಾಗುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತರಗತಿ ಹಾಜರಾತಿ ನಿಯಮಗಳನ್ನು ಸಡಿಲಿಸಲು ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಲಾಕ್‍ಡೌನ್ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ದ್ವಿತೀಯ ಪಿಯು ಕಾಲೇಜುಗಳು ಮತ್ತೆ ತೆರೆದಿದ್ದರೂ ಸಹ, ವೈರಸ್ ಹರಡಬಹು ದೆಂಬ ಭಯದಿಂದ ಇನ್ನೂ ಅನೇಕರು ಆಫ್ ಲೈನ್ ತರಗತಿಗಳಿಗೆ ಹಾಜರಾಗುತ್ತಿಲ್ಲ. ಆದ್ದ ರಿಂದ ಈ ಶೈಕ್ಷಣಿಕ ವರ್ಷದ ನಿಯಮಗಳನ್ನು ಸಡಿಲಿಸಲು ಮಂಡಳಿ ತೀರ್ಮಾನಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ, ಪಿಯುಸಿ, ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪೆÇ್ಲಮಾ ಕೋರ್ಸ್‍ಗೆ ಅಂತಿಮ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆ ಯಲು, ವಿದ್ಯಾರ್ಥಿಗಳು ಶೇ.75 ಹಾಜರಾತಿ ಹೊಂದಿರ ಬೇಕು ಎಂಬ ನಿಯಮವಿತ್ತು. ಈ ನಿಯಮವನ್ನು ಸಡಿಲಿಸಲಾಗಿದೆ.