ನಂಜನಗೂಡು ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತ ಸಾಗರ

ನಂಜನಗೂಡು:  ಕಪಿಲಾ ನದಿ ದಡದಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಅಷಾಡ ಪ್ರಥಮ ಶುಕ್ರವಾರವಾದ ಇಂದು ಸಾವಿರಾರು ಭಕ್ತಾದಿಗಳು ಸರದಿಯಲ್ಲಿ ಆಗಮಿಸಿ ದರ್ಶನ ಮಾಡಿ ಪುನೀತರಾದರು.

ಬೆಳಿಗ್ಗೆಯಿಂದಲೇ ಹೆಂಗಳೆಯರು ಭಕ್ತಿ ಭಾವದಿಂದ ದೇಗುಲಕ್ಕೆ ಆಗಮಿಸಿದರು. ದೇಗುಲದಲ್ಲಿ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಚಾಮುಂಡೇಶ್ವರಿ ಮೂರ್ತಿಯನ್ನು ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಹರಕೆ ತೀರಿಸಿದ್ದಲ್ಲದೇ ನಿಂಬೆಹಣ್ಣಿನ ಆರತಿ ಮಾಡಿದರು. ವಿವಿಧ ಸಂಘ ಸಂಸ್ಥೆಗಳು ಮತ್ತು ದೇಗುಲದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.