ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸುಳವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಹಣ್ಣು ಹಂಪಲು ವಿತರಣೆ

ಮೈಸೂರು:  ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಸುಳವಾಡಿ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥಗೊಂಡವರಿಗೆ ಹಣ್ಣು ಹಂಪಲು ವಿತರಿಸಲಾಯಿತು.

ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘÀದ ಪದಾಧಿಕಾರಿಗಳು ಗುರು ವಾರ ಸಂಜೆ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡಿರುವವರ ಆರೋಗ್ಯ ವಿಚಾ ರಿಸಿ, ಸಾಂತ್ವನ ಹೇಳಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಮಂಜುನಾಥ್ ಮಾತನಾಡಿ, ಸುಳವಾಡಿ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥ ಗೊಂಡವರು ಬಡವರೇ ಆಗಿದ್ದು, ಅವರಿಗೆ ಸಾಂತ್ವನ ಹೇಳುವ ಜತೆಗೆ ತಮ್ಮ ಕೈಲಾ ದಷ್ಟು ಸೇವೆ ಮಾಡಬೇಕೆಂಬ ಉದ್ದೇಶ ದಿಂದ ಹಣ್ಣು-ಹಂಪಲು ವಿತರಿಸಿದ್ದೇವೆ ಎಂದರು. ಸಂಘದ ಉಪಾಧ್ಯಕ್ಷೆ ಶಾಂತಮ್ಮ, ಕೋಶಾಧ್ಯಕ್ಷ ಧನು, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜ್, ಸಂಘ ಟನಾ ಕಾರ್ಯದರ್ಶಿ ವೇಣು, ಎಸ್. ಪ್ರದೀಪ್ ಕುಮಾರ್, ಸಹಕಾರ್ಯದರ್ಶಿ ರಾಜೇಶ್, ಹೆಚ್.ಡಿ.ಕೋಟೆ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಸಹ ಕಾರ್ಯ ದರ್ಶಿ ಅನುಕಲಾ, ಪದಾಧಿಕಾರಿಗಳಾದ ಮಂಜುನಾಥ್, ಟಿಜಿಟಿ ಮಹೇಶ್, ಗುರು ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.