ಪಾಲಿಬೆಟ್ಟದಲ್ಲಿ ಈದ್ ಮಿಲಾದ್ ಸಂದೇಶ ಮೆರವಣಿಗೆ

ಸಿದ್ದಾಪುರ:  ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1493ನೇ ಜನ್ಮ ದಿನಾ ಚರಣೆಯ ಅಂಗ ವಾಗಿ ಈದ್ ಮಿಲಾದ್ ಸಂದೇಶ ಮೆರವಣಿಗೆ ಪಾಲಿಬೆಟ್ಟದಲ್ಲಿ ನಡೆಯಿತು.

ಮುಸ್ಲಿಂ ಬಾಂಧ ವರು ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆಯಲ್ಲಿ ಸಾಗಿ ಪ್ರವಾದಿ ಸಂದೇಶ ಸಾರಿದರು. ಈ ಸಂದರ್ಭ ಮುಸ್ಲಿಂ ಜಮಾಯತ್ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್, ಮಸೀದಿಯ ಖತೀಬ್ ಅಲಿ ಸಖಾಫಿ, ಸೈಯದ್ ಅಬ್ದುಲ್ ರೆಹ್ಮಾನ್ ತಂಙಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.