ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ

ನಂಜನಗೂಡು:  ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ಇಂದು ಸಂಜೆ ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಜೂನ್ 10ರಂದು ಕೆ.ಎಸ್. ಈಶ್ವರಪ್ಪನವರ ಜನುಮದಿನವಿದ್ದು, ಈ ಹಿನ್ನಲೆಯಲ್ಲಿ ನಂಜುಂಡೇಶ್ವರ ಸನ್ನಿಧಿಯಲ್ಲಿ ಹೋಮ ಹವನಗಳನ್ನು ಏರ್ಪಾಡು ಮಾಡಲು ಆಗಮಿಸಿದ್ದರೆನ್ನಲಾಗಿದೆ. ಸುಮಾರು ಮೂರೂವರೆ ಸಾವಿರಕ್ಕೂ ಹೆಚ್ಚು ಮಹಿಳೆಯರು ಶಿವಮೊಗ್ಗದಿಂದ ಜೂನ್ 9ರಂದು ನಡೆಯಲಿರುವ ಹೋಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿ ರುವುದರಿಂದ ಅವರಿಗೆ ವಸತಿ, ಸ್ನಾನ, ಊಟದ ವ್ಯವಸ್ಥೆಗಳ ಬಗ್ಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳೊಡನೆ ಇದೇ ವೇಳೆ ಈಶ್ವರಪ್ಪನವರು ಚರ್ಚಿಸಿದರು. ಈ ಸಂದರ್ಭ ದಲ್ಲಿ ದೇಗುಲದ ಕಾರ್ಯನಿವಾರ್Àಹಕ ಅಧಿಕಾರಿ ಕುಮಾರಸ್ವಾಮಿ, ಗಂಗಯ್ಯ, ಮುಖಂಡರಾದ ಕೆ. ಕಪಿಲೇಶ್, ಕೃಷ್ಣಪ್ಪ ಗೌಡ, ಶ್ರೀಕಂಠ, ಸಿದ್ದು, ಕುರಹಟ್ಟಿ ಸಿದ್ದರಾಜು, ಅಜಿತ್ ಇತರರಿದ್ದರು.