ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ

ಮೈಸೂರು: ಮೈಸೂರಿನ ಕಾಂಗ್ರೆಸ್ ಮುಖಂಡ ನಾಗೇಶ್ ಕರಿಯಪ್ಪ ಅವರು ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರು ಮೈಸೂರು ನಗರ ಎನ್‍ಎಸ್ ಯುಐ ಕಾರ್ಯದರ್ಶಿಯಾಗಿ, ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಸರ್ಕಾರದಿಂದ ಮೈಸೂರು ವಿವಿ ಶೈಕ್ಷಣಿಕ ಸಮಿತಿಗೂ ನೇಮಕ ವಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಸಂದರ್ಶನ ಹಾಗೂ 6 ತಿಂಗಳ ತರಬೇತಿ ಅವಧಿಯನ್ನು ಪೂರೈಸಿ ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.