ಪ್ರಧಾನ ಮಂತ್ರಿ ಪರಿಹಾರ ನಿಧಿ ವಿತರಣೆ

ಮೈಸೂರು: ಶ್ರವಣದೋಷದಿಂದ ಬಳಲುತ್ತಿದ್ದ ಮಹಿಳೆಗೆ ಶ್ರವಣ ಉಪಕರಣ ಖರೀದಿಸಲು ಪ್ರಧಾನಿಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ 23,100ರೂ.ಗಳನ್ನು ಸಂಸದ ಪ್ರತಾಪಸಿಂಹ ಹಸ್ತಾಂತರಿಸಿದರು.

ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಶ್ರೀಮತಿ ತಾಯಮ್ಮ ಅವರು ಶ್ರವಣದೋಷದಿಂದ ಬಳಲುತ್ತಿದ್ದರು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರಿಗೆ ಶ್ರವಣ ಉಪಕರಣ ಖರೀಸುವಂತೆ ಸೂಚಿಸಿದ್ದರು.

ಶ್ರವಣ ಉಪಕರಣ ಖರೀದಿಸಲು ಪರಿಹಾರವಾಗಿ ಸಂಸದರು ಶಿಫಾರಸು ಮಾಡಿದ್ದ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜುರಾಗಿತ್ತು.ಈ ಹಣದ ದಾಖಲೆಗಳನ್ನು ತಾಯಮ್ಮ ಅವರ ಮಗನಿಗೆ ಸಂಸದರು ಹಸ್ತಾಂತರಿಸಿದರು.