ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಗುಂಡ್ಲುಪೇಟೆ: ದೀಪಾವಳಿ ಮತ್ತು ಕಾರ್ತೀಕ ಮಾಸ ಅಂಗವಾಗಿ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು.

ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಪುರಾತನ ಶಿವಲಿಂಗಕ್ಕೆ ಅರಿಶಿನದಿಂದ ಅಲಂ ಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.ಬಿ.ಕುಮಾರಸ್ವಾಮಿ, ವಕೀಲ ಸಿದ್ದರಾಜು, ಮಹದೇವಪ್ರಸಾದ್, ನಿಜಗುಣ ರಾಜು, ವೃಷಬೇಂದ್ರ, ವಸಂತಮ್ಮ ಇತರರು ಉಪಸ್ಥಿತರಿದ್ದರು.