ವಿಧಾನ ಪರಿಷತ್ ಸದಸ್ಯ ಧರ್ಮಸೇನರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಮೈಸೂರು:  ಮೈಸೂರು ಮತ್ತು ಚಾಮರಾಜನಗದ ಜಿಲ್ಲಾ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿಗೆ ಅಧಿಕ ಮತಗಳಿಂದ ಜಯ ಗಳಿಸಿದ ಆರ್. ಧರ್ಮಸೇನ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್. ಸುನಂದಕುಮಾರ್ ವರಿಷ್ಠರಲ್ಲಿ ಒತ್ತಾಯಿಸಿದ್ದಾರೆ.