ಮೈಸೂರು: ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ವಾರ್ಷಿಕ 60 ಲಕ್ಷ ಜನರು ವಿಶ್ವದಲ್ಲಿ, 27 ಸಾವಿರ ಜನ ಭಾರತದಲ್ಲಿ ಸಾವಿಗೀಡಾ ಗುತ್ತಿದ್ದಾರೆ. ಇನ್ನಾದರೂ ಜನರು ಎಚ್ಚೆತ್ತು ಕೊಂಡು ತಂಬಾಕು ಸೇವನೆಯಿಂದ ಹೊರಬರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಭಾರತೀಯ ವೈದ್ಯ ಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಶುಕ್ರವಾರ ಆಯೋ ಜಿಸಿದ್ದ `ವಿಶ್ವ ತಂಬಾಕು ರಹಿತ ದಿನಾ ಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ಸೇವನೆ ಆರೋಗ್ಯವಂತ ಸಮಾಜದ ಮೇಲೆ ವ್ಯಾಪಕವಾಗಿ ದುಷ್ಪರಿ ಣಾಮ ಬೀರುತ್ತಿದೆ. ಸಿಗರೇಟ್, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಪೊಟ್ಟ ಣದ ಮೇಲೆ `ಆರೋಗ್ಯಕ್ಕೆ ಹಾನಿ ಕಾರಕ’ ಎಂದು ನಮೂದಿಸಿದ್ದರೂ, ಚಟಕ್ಕೆ ಒಳಗಾ ಗಿರುವವರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದಾರೆ. ಇದರಿಂದ ಹಲ ವಾರು ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರ ವರ್ಷಕ್ಕೆ ವಿಶ್ವದಲ್ಲಿ ತಂಬಾಕಿನಿಂದ ಬರುವ ಕ್ಯಾನ್ಸರ್ಗೆ 60 ಲಕ್ಷ ಜನರು ಸಾವಿಗೀಡಾಗುತ್ತಿದ್ದರೆ, ಭಾರತದಲ್ಲಿ 27 ಸಾವಿರ, ಕರ್ನಾಟಕದಲ್ಲಿ 410 ಮಂದಿ ಮೃತರಾಗುತ್ತಿದ್ದಾರೆ. ತಂಬಾಕು ಹೃದಯ ಸಂಬಂಧಿ ಖಾಯಿಲೆಗೂ ದೂಡುತ್ತಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇಷ್ಟೆಲ್ಲಾ ದುಷ್ಪರಿಣಾಮ ಬೀರುವ ತಂಬಾ ಕನ್ನು ಸರ್ಕಾರ ಏಕೆ ನಿಷೇಧಿಸಿಲ್ಲ ಎಂಬ ಪ್ರಶ್ನೆ ಸಹಜ. ಆದರೆ ಸಂಪೂರ್ಣ ನಿಷೇಧಕ್ಕೆ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ. ದೇವಮಾನೆ ಮಾತನಾಡಿ, ಜನರಲ್ಲಿ ಸಾಮಾಜಿಕ ಪ್ರಜ್ಞೆ ಬಹುಮುಖ್ಯ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಹಾಗೂ ವಾಹಿನಿಗಳಲ್ಲಿ ಬರುವುದೆಲ್ಲ ವಾಸ್ತವತೆಗೆ ಹತ್ತಿರವಾಗಿರುವುದಿಲ್ಲ. ವಾಸ್ತವ ಸಂಗತಿ ತಿಳಿಯುವ ಪ್ರಜ್ಞೆ ಜನರಲ್ಲಿ ರಬೇಕು. ಶಾಲಾ-ಕಾಲೇಜಿನಲ್ಲಿ ರ್ಯಾಂಕ್ ಬಂದ ಮಾತ್ರಕ್ಕೆ ಪ್ರಜ್ಞಾವಂತಿಕೆ ಇರುವುದಿಲ್ಲ. ರ್ಯಾಂಕ್ ಗಳಿಸಿ ಹಲವರು ವಿದೇಶ ಗಳಲ್ಲಿ ದಿನಗೂಲಿ ನೌಕರಿ ಮಾಡುತ್ತಿರುವುದನ್ನು ಕಾಣಬಹುದು.
ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಬೇರೆ ಮಾದಕ ವಸ್ತುಗಳ ಬಳಕೆ ಹೆಚ್ಚಾಗುವ ಆತಂಕವಿದೆ. ಈಗಾ ಗಲೇ ಗಾಂಜಾ ಬೆಳೆ ನಿಷೇಧಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂ ತ್ರಣಾಧಿಕಾರಿ ಡಾ.ಎಸ್.ಚಿದಂಬರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಲಕ್ಷ್ಮಣ್, ತಂಬಾಕು ವಿರೋಧಿ ವೇದಿಕೆ ಸಂಚಾಲಕ ವಸಂತ ಕುಮಾರ ಮೈಸೂರು ಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಜಾಥಾ: ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ತಂಬಾಕು ಮುಕ್ತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಂಬಾಕು ಸೇವನೆಯಿಂ ದಾಗುವ ದುಷ್ಪರಿಣಾಮ ಕುರಿತ ಘೋಷಣಾ ಫಲಕ ಹಿಡಿದು, ಹಾರ್ಡಿಂಗ್ ವೃತ್ತ, ಮೈಸೂರು-ನೀಲಗಿರಿ ರಸ್ತೆ, ಗನ್ಹೌಸ್ ವೃತ್ತದ ಮೂಲಕ ಜೆಎಸ್ಎಸ್ ಆಸ್ಪತ್ರೆ ಆವರಣ ತಲುಪಿದರು. ಈ ಸಂದರ್ಭ ದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಇಪಿಡಿ ಡಾ.ಕವಿತಾ ಹಾಗೂ ಇನ್ನಿತರರಿದ್ದರು.