ಆದಿಚುಂಚನಗಿರಿ ಮಠದಲ್ಲಿ 70ನೇ ಹುಣ್ಣಿಮೆ ಕಾರ್ಯಕ್ರಮ ಸಕಾರಾತ್ಮಕ ಚಿಂತನೆಯಿಂದ ಸತ್ಕಾರ್ಯದಲ್ಲಿ ತೊಡಗಿ

ಹಾಸನ: ವ್ಯಕ್ತಿಯ ಜೀವನ ಆಶಾದಾಯಕವಾಗಿರಬೇಕೆಂದರೆ ಸಕಾರಾ ತ್ಮಕ ಚಿಂತನೆ ಮೂಲಕ ಸತ್ಕಾರ್ಯಗಳಲ್ಲಿ ತೊಡಗಬೇಕು ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಎಂ.ಜಿ ರಸ್ತೆಯ ಶ್ರೀಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 70ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ತುಟಿ ತೆರೆದು ನಗು ವುದು ಹೇಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಆಧ್ಯಾತ್ಮದ ಒಲವು ಬೆಳೆಸಿಕೊಂಡರೆ ವ್ಯಕ್ತಿ ಮಾನಸಿಕ ಸ್ಥಿಮಿತ ಸಾಧಿಸುತ್ತಾನೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಕಷ್ಟಗಳನ್ನು ದೊಡ್ಡದಾಗಿ ಪರಿಗಣಿಸದೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅಲ್ಲದೇ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಅಧಿಕ ಹೊತ್ತು ಬಾಧಿಸದೆ ದೂರವಾಗಬೇಕೆಂದರೆ ನಗುವ ವ್ಯವಧಾನ ರೂಢಿಸಿಕೊಳ್ಳಬೇಕು ಎಂದರು.

ಬದುಕು ಸ್ವಾರಸ್ಯದಿಂದ ಕೂಡಿರಬೇಕು ಎಂದರೆ ನಗುವ ಮನಸ್ಸಿರಬೇಕು. ಸದಾ ಇಲ್ಲದಿದ್ದರ ಬಗೆಗೆ ಕೊರಗುವುದನ್ನು ಬಿಟ್ಟು ಇರುವುದನ್ನು ಅನುಭವಿಸಿ ಖುಷಿ ಪಡುವ ಸ್ವಭಾವ ಬೆಳೆಸಿಕೊಳ್ಳಬೇಕು. ಹಿರಿಯರು ಅದನ್ನೇ ಪಾಲಿಸಿಕೊಂಡು ಬಂದಿದ್ದರಿಂದ ದೀರ್ಘಾಯುಷಿಗಳಾಗಿ, ಆರೋಗ್ಯಯುತ ವಾಗಿ ಬದುಕು ಸವೆಸಿದ್ದಾರೆ ಎಂಬುದನ್ನು ಎಲ್ಲರೂ ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಜನತೆ ನಮ್ಮ ಸಂಸ್ಕøತಿಯನ್ನು ಮರೆತು ನಡೆಯುತ್ತಿದೆ. ಇಂತಹ ಕೆಲಸ ಆಗ ಬಾರದು ಅದು ಎಂದಿಗೂ ಅಪಾಯಕಾರಿ ಎಂದ ಕಣ್ಣನ್, ಕೂಡಿ ಬಾಳುವುದನ್ನು ಕಲಿಯಬೇಕು. ಎಲ್ಲರೊಂದಿಗೂ ಕಾಲ ಕಳೆಯಬೇಕು ಆಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆ. ನಾವು ಸಾರ್ಥಕ ಬದುಕು ನಡೆಸಿದಂತಾಗುತ್ತದೆ ಎಂದರು.

ತನ್ನ ಮಕ್ಕಳ ಬಗೆಗೆ ಇತರರು ಒಳ್ಳೆಯ ಮಾತುಗಳನ್ನು ಆಡಿದರೆ ಖುಷಿ ಪಡುವ ತಂದೆ-ತಾಯಿ ಯಾವುದೇ ಸ್ವಾರ್ಥವಿಲ್ಲದೆ ಮಕ್ಕಳನ್ನು ಸಲಹಿ ಪೋಷಿಸುತ್ತಾರೆ. ಆದರೆ, ಕೆಲ ಮಕ್ಕಳು ವಯಸ್ಸಾದ ಕೂಡಲೇ ಅವರನ್ನು ವೃದ್ಧಾಶ್ರಮಗಳಿಗೆ ಅಟ್ಟುತ್ತಿ ದ್ದಾರೆ. ಇದು ನೋವಿನ ಸಂಗತಿ, ನಮ್ಮ ಸಂಸ್ಕøತಿ ಇತರರಿಗೆ ಹಿಂದೆಯೂ ಮಾದರಿ ಯಾಗಿದೆ. ಮುಂದೆಯೂ ಮಾದರಿಯಾಗ ಬೇಕಿದೆ ಎಂದರಲ್ಲದೇ, ಸುದೀರ್ಘ ಒಂದು ಗಂಟೆ ಉಪನ್ಯಾಸ ನೀಡಿದ ಕಣ್ಣನ್, ಹಾಸ್ಯ ಪ್ರಸಂಗಗಳ ಉದಾಹರಣೆ ಮೂಲಕ ಬದು ಕಿನ ಅರ್ಥ ಸಾರಿ ಸಭಿಕರÀ ಮನಸೆಳೆದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ತಂದೆ-ತಾಯಿ ಹಾಗೂ ಮಕ್ಕಳು ಸಂಸ್ಕಾರವಂತರಾಗಿದ್ದರೆ, ಆ ಮನೆ ನಂದಗೋಕುಲವಾಗಿರುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕುಟುಂ ಬವು ಸನ್ನಡತೆ ಹಾಗೂ ಪ್ರಾಮಾಣಿಕತೆ ಅಳವಡಿಸಿಕೊಂಡಿರಬೇಕು ಎಂದರು.

ನಮ್ಮ ಹೃದಯದಲ್ಲಿ ಭಗವಂತ ವಾಸ ವಾಗಿರುತ್ತಾನೆ. ಮನಸ್ಸು ರಾಮನ ರೀತಿ ಇದ್ದರೆ ಭಾವನೆಗಳೆಲ್ಲ ಸ್ವಚ್ಛವಾಗಿರುತ್ತದೆ. ಹೊರಗಡೆ ಎಷ್ಟೇ ಅಲಂಕಾರ ಮಾಡಿ ಕೊಂಡರೂ ಒಳಗಿರುವ ಕೊಳಕು ತೊಳೆಯ ದಿದ್ದರೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ದೇಹ ಹಾಗೂ ಮನಸ್ಸಿನ ಪರಿ ಶುದ್ಧತೆ ಮನುಷ್ಯನಿಗೆ ಮೋಕ್ಷದ ಹಾದಿ ತೋರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹುಣ್ಣಿಮೆ ಕಾರ್ಯ ಕ್ರಮಗಳ ಸಂಚಾಲಕ ಎಚ್.ಬಿ.ಮದನ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಬ್ಬಳಿ ಮಠದ ಶಿವಪುತ್ರ ಸ್ವಾಮೀಜಿ, ಆದಿ ಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿ ಸ್ಟಾರ್ ಸುಬ್ಬರಾಯ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಅರಸೀಕೆರೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತಕುಮಾರ್, ಶ್ರೀಮಠದ ವ್ಯವಸ್ಥಾ ಪಕ ಎಚ್.ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಕಾಲ ಭೈರವೇಶ್ವರ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು. ಶ್ರೀಆದಿಚುಂಚನ ಗಿರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಾರ್ಥನೆ ನೆರವೇರಿಸಿಕೊಟ್ಟರು. ಅರಕಲಗೂಡಿನ ಶ್ರೀಆದಿಚುಂಚನಗಿರಿ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಮಹೇಶ್ ಸ್ವಾಗತಿಸಿದರು. ಹಾಸನ ಕಾಲೇಜಿನ ಪ್ರಾಂಶುಪಾಲ ಚಂದ್ರ ಶೇಖರ್ ವಂದಿಸಿದರು. ಸಂಸ್ಕøತ ಉಪ ನ್ಯಾಸಕ ಎಚ್.ಕೆ.ಲಕ್ಷ್ಮೀನಾರಾಯಣ ಕಾರ್ಯ ಕ್ರಮದ ನಿರೂಪಣೆ ನಡೆಸಿಕೊಟ್ಟರು.