ಶ್ರೀ ಶಾರದಾ ವಿಪ್ರ ಸಂಘದ ವಾರ್ಷಿಕೋತ್ಸವ

ಮೈಸೂರು,ಜು.25-ಮೈಸೂರಿನ ಜೆ.ಪಿ. ನಗರದ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಶಾರದಾ ವಿಪ್ರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರ ಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವೈದ್ಯೆ ಡಾ.ಗೀತಾ ಅವಧಾನಿ ಮಾತನಾಡಿ, ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಯುವ ಜನಾಂಗ ಹೊಂದಿದರೆ ಮಾತ್ರ ಜೀವನದಲ್ಲಿ ಯಶ ಸ್ಸನ್ನು ಹೊಂದಲು ಸಾಧ್ಯ. ಅದಕ್ಕಾಗಿ ಪ್ರತಿ ಯೊಬ್ಬರು ಸೂಕ್ತ ಮಾರ್ಗದಲ್ಲಿ ಸಾಗ ಬೇಕು ಎಂದು ತಿಳಿಸಿದರು.

ವಿಪ್ರ ಮುಖಂಡ ನಂ.ಶ್ರೀಕಂಠ ಕುಮಾರ್ ಮಾತನಾಡಿ, ನಮ್ಮ ಧರ್ಮ, ಪರಂ ಪರೆಯ ಶ್ರೇಷ್ಠ ಯತಿಗಳು ಚಾತುರ್ಮಾಸ್ಯ ವ್ರತವನ್ನು ಎಲ್ಲೆಡೆ ಆಚರಿಸುತ್ತಿದ್ದರು. ಈ ವೇಳೆ ಯತಿಗಳ ದರ್ಶನವನ್ನು ಮಾಡಿ ಅನುಗ್ರಹ ಪಡೆದು ಸನ್ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರ ವಾಧ್ಯಕ್ಷ ಡಾ.ಎನ್.ಆರ್.ರಾಮಾನಂದ ರಾವ್, ಕಾರ್ಯದರ್ಶಿ ಡಿ.ಜಿ.ಸುರೇಶ್, ಟಿ.ಕೆ.ವೆಂಕಟೇಶ್ ಭಟ್, ಕೃಷ್ಣಮೂರ್ತಿ, ನಳನಿ ಗೋಪಾಲಕೃಷ್ಣ ಮತ್ತಿತರರು ಉಪ ಸ್ಥಿತರಿದ್ದರು.