ಬೆಂಗಳೂರಿನಲ್ಲಿ ಇನ್ನೊಬ್ಬ ವಂಚಕನ ಬಂಧನ

ಬೆಂಗಳೂರು: ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಮತ್ತು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

ಇನ್ನೊಂದೆಡೆ ಹೊಸದಾಗಿ ರೂಪುಗೊಂಡ ಎಸ್‍ಐಟಿ ತಂಡ ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಹುಡುಕುತ್ತಿದೆ. “ಇನ್ಸ್‍ಪೆಕ್ಟರ್ ಯತಿರಾಜ್ ನೇತೃತ್ವದ ಸಿಸಿಬಿ ತಂಡ ಕಳೆದ ರಾತ್ರಿ ಮುಕರ್ರಮ್‍ನನ್ನು ಬಂಧಿಸಿದೆ. ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆತ ಹಲವಾರು ಜನರಿಗೆ ಹಲಾಲ್ ಹಣದ ಹೆಸರಿನಲ್ಲಿ ವಂಚಿಸಿ ದ್ದನು ಎಂದು ಆರೋಪ ಕೇಳಿಬಂದಿದೆ” ಎಂದು ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇ ಶಕ (ಅಪರಾಧ ದಳ) ಅಲೋಕ್ ಕುಮಾರ್ ಹೇಳಿದ್ದಾರೆ. ಮುಕರ್ರಮ್ ತಾನು ಚೈನ್ ಲಿಂಕ್ ತರಹದ ಬಹು-ಮಟ್ಟದ ವ್ಯಾಪಾರೋದ್ಯಮ ನಡೆಸುತ್ತಿದ್ದನೆಂದು ವರದಿ ಯಾಗಿದೆ. ‘ಹಲಾಲ್ ಹೂಡಿಕೆಗಳ’ ಹೆಸರಿನಲ್ಲಿ ಕಂಪನಿಯು ತನ್ನ ಹೂಡಿಕೆದಾರರಿಗೆ ದೊಡ್ಡ ಲಾಭದ ಭರವಸೆ ನೀಡಿತ್ತು. ಆ ಮೂಲಕ ಕಂಪನಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಮತ್ತು ಹೆಚ್ಚಿನ ಹೂಡಿಕೆದಾರರನ್ನು ಕರೆತರಲು ಪೆÇ್ರೀತ್ಸಾಹಿಸಿತ್ತು. 2017ರಲ್ಲಿ ಐಟಿ ದಾಳಿ ಸಹ ಈ ಸಂಸ್ಥೆ ಮೇಲೆ ನಡೆದಿದ್ದು ಇಂಜಾಝ್ ಬಿಲ್ಡರ್ಸ್‍ಗೆ ಸೇರಿದ್ದ ಸುಮಾರು 3,500 ಬ್ಯಾಂಕ್ ಖಾತೆಗಳನ್ನು ಅವರು ಪತ್ತೆ ಮಾಡಿದ್ದರು.