ಬಲಿಜ ಸಮಾಜದ ಕ್ರಿಕೆಟ್ ಕ್ರೀಡಾಕೂಟ: ಸಿಬಿ ಟಸ್ಕರ್ಸ್ ಚೊಚ್ಚಲ ಚಾಂಪಿಯನ್

ಗೋಣಿ ಕೊಪ್ಪಲು:  ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಕೊಡಗು ಬಲಿಜ ಸಮಾ ಜದ ವತಿಯಿಂದ ನಡೆದ ಪ್ರಥಮ ವರ್ಷದ ಕೊಡಗು ಬಲಿಜ ಕ್ರೀಡೋತ್ಸವದ ಕ್ರಿಕೆಟ್‍ನಲ್ಲಿ ಸಿಬಿ ಟಸ್ಕರ್ಸ್ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್ ಎತ್ತಿ ಹಿಡಿಯಿತು. ಫೈನಲ್ ನಲ್ಲಿ ಸೋಲನುಭವಿಸಿದ ತಿತಿಮತಿ ಬ್ಲೂ ಬಾಯ್ಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಳೆಯ ಕಾರಣ ಬಾಲೌಟ್ ನಿಯಮದ ಮೂಲಕ ವಿಜೇತರನ್ನು ಘೋಷಿಸಲಾಯಿತು. ಸಿ. ಬಿ. ಟಸ್ಕರ್ಸ್ ತಂಡವು ಬಾಲೌಟ್‍ನಲ್ಲಿ ತಿತಿಮತಿ ಬ್ಲೂಬಾಯ್ಸ್ ತಂಡವನ್ನು ಮಣ ಸಿ ಕಪ್ ಗೆದ್ದುಕೊಂಡಿತು. ಕ್ರಿಕೆಟ್ ಟೂರ್ನಿ ಯಲ್ಲಿ ಶಿಸ್ತಿನ ಆಟವಾಡುವ ಮೂಲಕ ಕೂರ್ಗ್ ನಾಯ್ಡು ಬಾಯ್ಸ್ ಶಿಸ್ತುಬದ್ಧ ತಂಡ ಪ್ರಶಸ್ತಿ ಪಡೆದುಕೊಂಡಿತು. ಸರಣ ಶ್ರೇಷ್ಠ ಪ್ರಶಸ್ತಿ ಯನ್ನು ಸಿಬಿ ಟಸ್ಕರ್ಸ್ ತಂಡದ ಕಿರಣ್ ಪಡೆದುಕೊಂಡರು. ಟೂರ್ನಿಯಲ್ಲಿ 83 ರನ್ ಗಳಿಸಿ 4 ವಿಕೆಟ್ ಪಡೆಯುವ ಮೂಲಕ ಇವರು ಈ ಸಾಧನೆ ಮಾಡಿದರು. ಪಂದ್ಯ ಪುರುಷರಾಗಿ ಸಿ. ಬಿ. ಟಸ್ಕರ್ಸ್‍ನ ದೀಪಕ್, ಉತ್ತಮ ಬೌಲರ್ ಪ್ರಶಸ್ತಿಯನ್ನು ತಿತಿಮತಿ ತಂಡದ ಬಾಲು 9 ವಿಕೆಟ್ ಪಡೆಯುವ ಮೂಲಕ ಪಡೆದುಕೊಂಡರು.

ಮಹಿಳೆಯರಿಗೆ ನಡೆದ ಹಗ್ಗಜಗ್ಗಾಟದಲ್ಲಿ ಮೂರ್ನಾಡು ತಂಡ ಪ್ರಥಮ, ಗೋಣ ಕೊಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರಲ್ಲಿ ಶಿರಂಗಾಲ ಎ. ಪ್ರಥಮ, ಟಸ್ಕರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆ ಯರ ಸಂಗೀತ ಕುರ್ಚಿಯಲ್ಲಿ ಗೋಣ ಕೊಪ್ಪದ ಜಯಶ್ರೀ ಪ್ರಥಮ, ಬೆಕ್ಕೆಸೊಡ್ಲೂರು ವಿನ ಶೀತಲ್ ನಾಯ್ಡು ದ್ವಿತೀಯ, ಬಲ ಮುರಿಯ ನಿರ್ಮಲ ತೃತೀಯ ಸ್ಥಾನ ಪಡೆದರು.

ತೀರ್ಪುಗಾರರಾಗಿ ತಿಮ್ಮಯ್ಯ, ಅಭಿಷೇಕ್, ಅಲೋಕ್, ವಿವೇಕ್, ಚಿದಾನಂದ್ ಕಾರ್ಯ ನಿರ್ವಹಿಸಿದರು. ಮಡಿವಾಳರ ವಿನೋದ್ ವೀಕ್ಷಕ ವಿವರಣೆ ನೀಡಿದರು.

ಸಮಾರೋಪದಲ್ಲಿ ಕೊಡಗು ಬಲಿಜ ಸಮಾಜ ಅಧ್ಯಕ್ಷ ತೆಲುಗರ ಲಕ್ಷ್ಮಣ್ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಗಳಾಗಿ ಶಾಸಕ ಕೆ.ಜಿ.ಬೋಪಯ್ಯ, ಬಲಿಜ ಸಮಾಜದ ಪ್ರಮುಖರುಗಳಾದ ಗಣೇಶ್ ನಾಯ್ಡು, ವೀರೇಂದ್ರಕುಮಾರ್, ರಾಜಶೇಖರ್, ಶ್ರೀನಿವಾಸ್, ಟ್ರೋಫಿ ದಾನಿ ಟಿ. ವೇಣು ಗೋಪಾಲ್ ಪಾಲ್ಗೊಂಡಿದ್ದರು. ಬಲಿಜ ಮುಖಂಡ ಗೋವಿಂದಪ್ಪ ಮಾತನಾಡಿ, ಬಡವರ್ಗದ ಸಂಖ್ಯೆ ನಮ್ಮಲ್ಲಿ ಹೆಚ್ಚಿದ್ದರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗ ಬೇಕು. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಉನ್ನತ ಸ್ಥಾನಮಾನ ಗಳಿಸಲು ಅವಕಾಶ ಮಾಡಿಕೊಡಬೇಕು ಎಂದರು. ರಾಜಕೀಯವಾಗಿ ಬಲಿಜರು ಹಿಂದೆ ಇದ್ದೇವೆ. ರಾಜಕೀಯ ಸ್ಥಾನಮಾನ ಪಡೆಯಲು ಯೋಜನೆ ರೂಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿ ನಾಯ್ಡು, ತಾಲೂಕು ಬಲಿಜ ಸಮಾಜ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷ ಎಸ್.ಕೆ. ಯತಿರಾಜ್‍ನಾಯ್ಡು, ಪ್ರ. ಕಾರ್ಯದರ್ಶಿ ಗೀತಾ ನಾಯ್ಡು, ಗೌ. ಕಾರ್ಯದರ್ಶಿ ಗಣೇಶ್, ಖಜಾಂಜಿ ಟಿ.ಎನ್.ಲೋಕನಾಥ್, ಬಲಿಜ ಬಿಂಬ ಸಂಪಾದಕ ಎನ್.ಸಂಜೀವಪ್ಪ, ಮಾರತ್ ಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.