ಮಾಲ್ಡೀವ್ಸ್ ನಾಗರಿಕರಿಗೆ ಅಗತ್ಯ ರಕ್ಷಣೆಗೆ ಮನವಿ

ಮೈಸೂರು: ಭಾರತಕ್ಕೆ ಮಾಲ್ಡೀವ್ಸ್‍ನಿಂದ ನಿಯೋಜನೆಯಾಗಿರುವ ರಾಯಭಾರಿ ಐಶತ್ ಮಹಮ್ಮದ್ ದೀದಿ ಅವರು, ಮೈಸೂರು ನಗರ ಪೊಲೀಸ್ ಆಯುಕ್ತ ರವರ ಕಚೇರಿಗೆ ಭೇಟಿ ನೀಡಿ, ನಗರದಲ್ಲಿ ಮಾಲ್ಡೀವ್ಸ್ ನಾಗರಿಕರ ರಕ್ಷಣೆ ಮತ್ತು ಕ್ಷೇಮಾ ಭಿವೃದ್ದಿ ಕುರಿತು ಚರ್ಚಿಸಿದರು. ಮೈಸೂರು ನಗರದಲ್ಲಿ ಒಟ್ಟು 83 ಮಾಲ್ಡೀವ್ಸ್ ನಾಗರಿ ಕರು ವಾಸವಿದ್ದು, ಎಲ್ಲಾ ರೀತಿಯ ಅಗತ್ಯ ರಕ್ಷಣೆ ಮತ್ತು ಸಹಕಾರ ಒದಗಿಸಬೇಕೆಂದು ನಗರದ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರೊಂದಿಗೆ ಮಾತಕತೆ ನಡೆಸಿದರು. ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜು, ಮಾಲ್ಡೀವ್ಸ್ ರಾಯ ಭಾರಿ ಕಚೇರಿಯ ಕಾರ್ಯದರ್ಶಿ ಡಾ.ಸೈಯದ್ ಅಜರ್ ಅಹಮದ್ ಉಪಸ್ಥಿತರಿದ್ದರು.