ರಾಜ್ಯದಲ್ಲಿ ಹೊಸದಾಗಿ 4120 ಮಂದಿಗೆ ಕೊರೊನಾ

ಬೆಂಗಳೂರು, ಜು.19-ರಾಜ್ಯದಲ್ಲಿ ಭಾನುವಾರ ಹೊಸದಾಗಿ 4120 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 63,772ಕ್ಕೆ ಏರಿಕೆಯಾಗಿದೆ.91 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 1331ಕ್ಕೆ ಏರಿಕೆಯಾಗಿದೆ. ಇಂದು 1290 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಈವರೆಗೆ 23,065 ಮಂದಿ ಗುಣಮುಖರಾದಂತಾಗಿದೆ.

39,370 ಸಕ್ರಿಯ ಸೋಂಕಿತರ ಪೈಕಿ 579 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 60,385 ಮತ್ತು ದ್ವಿತೀಯ ಸಂಪರ್ಕದ 55,380 ಮಂದಿ ಸೇರಿದಂತೆ ಒಟ್ಟು 1,15,765 ಮಂದಿಯನ್ನು ಕ್ವಾರಂಟೈನ್ ಮಾಡ ಲಾಗಿದೆ. ಬೆಂಗಳೂರಿನಲ್ಲಿ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಮಗಳೂರು 135, ಉಡುಪಿ 134, ಧಾರವಾಡ 126, ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂಗಳೂರು ಗ್ರಾಮಾಂತರ 70, ಕಲಬುರಗಿ ಮತ್ತು ಉತ್ತರ ಕನ್ನಡ ತಲಾ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ 25, ಚಾಮ ರಾಜನಗರ 38, ತುಮಕೂರು ಮತ್ತು ಕೊಪ್ಪಳ ತಲಾ 19, ಚಿತ್ರದುರ್ಗ 17, ಕೊಡಗು ಮತ್ತು ಯಾದಗಿರಿ ತಲಾ 10, ಮಂಡ್ಯದಲ್ಲಿ 7 ಪ್ರಕರಣ ದಾಖಲಾಗಿವೆ.