ಪತ್ರಕರ್ತರು, ಪತ್ರಿಕಾ ವಿತರಕರಿಗೆ ಆರೋಗ್ಯ ಕಿಟ್ ವಿತರಣೆ

ನಾಗಮಂಗಲ, ಏ.9- ತಾಲೂಕಿನ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ರಾಜ್ಯ ಪಡಿತರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪನವರು ನಾಗಮಂಗಲ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಆರೋಗ್ಯ ಕಿಟ್ ವಿತರಿಸಿದರು.

ಮಹಾಮಾರಿ ಕೊರೊನ ವೈರಸ್ ಬಂದಿ ರುವ ಹಿನ್ನೆಲೆಯಲ್ಲಿ ಮನೆ-ಮನೆಗೆ ಪತ್ರಿಕೆ ಯನ್ನು ತಲುಪಿಸುತ್ತಿರುವ ಪತ್ರಿಕಾ ವಿತರP Àರಿಗೆ ಹಾಗೂ ಪತ್ರಕರ್ತರಿಗೆ ಆರೋಗ್ಯದ ದೃಷ್ಟಿಯಿಂದ ಮಾಸ್ಕ್, ಕೈ ಕವಚ, ಸ್ಯಾನಿಟೈಜರ್ ನ್ನು ವಿತರಿಸಲಾಯಿತು. ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ದಂಡಾ ಧಿಕಾರಿ ಕು.ಞ. ಅಹಮದ್, ಪುರಸಭೆ ಮುಖ್ಯಾ ಧಿಕಾರಿ ಕೃಷ್ಣಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇ.ಒ. ಅನಂತರಾಜು ಹಾಗೂ ಪಪಂ ಮಾಜಿ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು.