ಎಸ್‍ಬಿಐ ಗೃಹ, ಕಾರ್ ಲೋನ್ ಉತ್ಸವಕ್ಕೆ ಚಾಲನೆ

ಮೈಸೂರು:  ಮೈಸೂರಿನ ಬಲ್ಲಾಳ್ ವೃತ್ತದ ಬಳಿಯಿರುವ ನಿತ್ಯೋತ್ಸವ ಭವನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಆಯೋಜಿಸಿರುವ 2 ದಿನಗಳ ಎಸ್‍ಬಿಐ ಗೃಹ ಮತ್ತು ಕಾರ್ ಲೋನ್ ಉತ್ಸವಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ. ಎ.ಸುಬ್ರಹ್ಮಣ್ಯೇಶ್ವರರಾವ್ ಚಾಲನೆ ನೀಡಿದರು. ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇ ಜರ್ ತಿಲಕ್‍ರಾಜ್ ಪಕ್ವ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍ಗಳಾದ ನಾಗಪ್ಪ, ಕೆ.ಪಿ.ಮಹ ದೇವ್‍ಕುಮಾರ್, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ರವೀಂದ್ರಭಟ್, ವಿವಿಧ ವಿಭಾಗಗಳ ಅಧಿಕಾರಿಗಳಾದ ಪೈ.ಚಿನ್ನಸ್ವಾಮಿ, ಮುರುಳೀಧರ, ಅರುಣ್ ಕುಮಾರ್, ಎಸ್.ಎಸ್.ಪಾಶ್ರ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂದಿನಿಂದ 2019ರ ಫೆ.31ರವರೆಗೆ 35 ಲಕ್ಷ ರೂ.ಗೆ ಒಳಪಟ್ಟ ಗೃಹಸಾಲಕ್ಕೆ ಶೇ. 0.15 ಬಡ್ಡಿ ರಿಯಾಯಿತಿ, ಡಿ.31ರವರೆಗೆ 35ಲಕ್ಷ ರೂ. ಮೇಲ್ಪಟ್ಟ ಸಾಲಕ್ಕೆ ಶೇ.0.25 ಬಡ್ಡಿ ರಿಯಾಯಿತಿ ನೀಡಲಾಗಿದೆ. ಅಲ್ಲದೆ ಬಿಲ್ಡರ್‍ಗಳ ಹೌಸಿಂಗ್ ಪ್ರಾಜೆಕ್ಟ್‍ಗಳಿಗೆ ಕಾನೂನು ಸಲಹೆ, ಪ್ರೊಜೆಕ್ಟರ್ ವ್ಯಾಲ್ಯುಯೇಷನ್ ಹಾಗೂ ಇಂಟೀರಿಯಮ್ ಗ್ಯಾರೆಂಟರ್ ಪಡೆಯಬೇಕೆಂಬ ನಿಯಮಕ್ಕೆ ವಿನಾಯಿತಿ ನೀಡಲಾಗಿದೆ.