ಪಾಂಡುರಂಗ ದೇವಸ್ಥಾನದಲ್ಲಿ ಏಕಾದಶಿ ಆಚರಣೆ

ಮೈಸೂರು: ಪ್ರಥಮ ಏಕಾದಶಿ ಅಂಗವಾಗಿ ಮೈಸೂರಿನ ಲಷ್ಕರ್ ಮೊಹಲ್ಲಾ ಕಬೀರ್ ರಸ್ತೆ ಶ್ರೀ ಪಾಂಡುರಂಗ ವಿಠಲಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಮುಂಜಾನೆ 5 ಗಂಟೆಗೆ ಕಾಕಡಾರತಿ, ವಿಶೇಷ ಹಾಲಿನ ಅಭಿಷೇಕ, ಫಲ ಪಂಚಾಮೃತ, ಅಷ್ಟೋತ್ತರ ಪೂಜೆ ಇನ್ನಿತರ ಪೂಜೆಗಳು ನಡೆದವು. ಇದರ ಅಂಗವಾಗಿ ಇಡೀ ದೇವಾಲಯವನ್ನು ವಿಶೇಷ ಹೂವಿನ ಅಲಂಕರಿಸಲಾಗಿತ್ತು.

ಸಂಜೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ದೇವರನಾಮ, ಭಜನೆ, ವಿದ್ವಾನ್ ಗಣೇಶ್ ಶರ್ಮಾ ಅವರಿಂದ ಪ್ರವಚನ, ರಾತ್ರಿ ಮೈಸೂರಿನ ಇಸ್ಕಾನ್ ತಂಡದಿಂದ ಶ್ರೀ ಕೃಷ್ಣ ಬಲರಾಮರ ಭಜನೆ, ರಾತ್ರಿ ಭಾವಸಾರ ಕ್ಷತ್ರಿಯ ಪಾಂಡುರಂಗ ಭಜನಾ ಮಂಡಳಿಯಿಂದ ಸಾಂಪ್ರದಾಯಿಕ ಪಂಡರಿ ಭಜನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಜಯರಾಂರಾವ್ ಲಾಳಿಗೆ, ಪದಾಧಿಕಾರಿಗಳಾದ ಚೈತನ್ಯಕುಮಾರ್ ಹಿರಾಸ್ಕರ್, ಟಿ.ಹೆಚ್.ನಾರಾಯಣರಾವ್ ತೇಲ್ಕರ್, ಕೆ.ಜಿ.ವೆಂಕಟೇಶ್‍ರಾವ್ ಕುತ್ನೀಕರ್, ವಿಠಲ್‍ರಾವ್ ಲಾಳಿಗೆ, ಬಾಲಾಜಿರಾವ್ ನಾಯಕ್, ಭಜನಾ ಮಂಡಲಿಯ ಪಿ.ನಾಗರಾಜ್ ಪತಂತೆ, ಪಿ.ಸಂತೋಷ್ ಪತಂಗೆ, ಎಬಿಬಿಕೆ ಯುವ ಪರಿಷತ್ ರಾಜ್ಯಾಧ್ಯಕ್ಷ ಗಣೇಶ್ ಲಾಳಿಗೆ ಇನ್ನಿತರರು ಪಾಲ್ಗೊಂಡಿದ್ದರು.

ಇಂದು ಭಕ್ತಿ ಸಂಗೀತ: ಮಂಗಳವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಧನಲಕ್ಷ್ಮಿ ವಿಜಯಕುಮಾರ್ ಮಾಳೋತ್ಕರ್ ತಂಡದಿಂದ ದೇವರನಾಮ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮವಿದೆ.