ಸೋಮವಾರಪೇಟೆ ಬಳಿ ಕುರುಚಲು ಕಾಡಿಗೆ ಬೆಂಕಿ

ಸೋಮವಾರಪೇಟೆ: ಇಲ್ಲಿನ ಮಹಾತ್ಮಗಾಂಧಿ ರಸ್ತೆಯ ಸಯ್ಯದ್ ಇರ್ಫಾನ್ ಮನೆಯ ಹಿಂಭಾಗದ ಕುರುಚಲು ಕಾಡಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಯಾಗಿತ್ತು. ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂ ದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಬೆಂಕಿ ನಂದಿಸುವ ಸಂದರ್ಭ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಲವ, ಪ್ರಮು ಖರಾದ ಕೌಶಿಕ್ ಎಂ.ಜೆ, ಲಕ್ಷ್ಮೀಕುಮಾರ್, ಚೇತನ್, ಪ್ರಕಾಶ್ ಮತ್ತಿತರರು ಇದ್ದರು.