ನೆರೆ ಸಂತ್ರಸ್ತರ ಮಕ್ಕಳಿಗೆ ಶ್ರೀ ಸುತ್ತೂರು ಮಠದಿಂದ ಉಚಿತ ಶಿಕ್ಷಣ

ಮೈಸೂರು, ಆ.24-ಕರ್ನಾಟಕದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾ ಟಕದ ನೆರೆ ಸಂತ್ರಸ್ತರ ಕುಟುಂಬದ ಮಕ್ಕಳಿಗೆ ಜೆಎಸ್‍ಎಸ್ ವಿದ್ಯಾಪೀಠದಿಂದ ಶಾಲೆ, ಕಾಲೇಜು, ತಾಂತ್ರಿಕ ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆಸನ-ವಸತಿಗಳಿಗೂ ಅನುಕೂಲ ಮಾಡಿಕೊಡಲಾಗುವುದು. ಆಸಕ್ತರು ಆಯಾ ಜಿಲ್ಲೆಗಳ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಬಿ.ನಿರಂಜನಮೂರ್ತಿ ಅವರನ್ನು ನೇರ ವಾಗಿ ಅಥವಾ ಮೊ. 8884471974 ಸಂಪರ್ಕಿಸಬಹುದು.