ಪ್ರಿಯಕರನ ಅವಾಜ್‍ನಿಂದ ಬೇಸತ್ತು ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

ಮೈಸೂರು: ಪ್ರೀತಿಸಿದ ಹುಡುಗ ತನಗೆ ಅವಾಜ್ ಹಾಕಿ ಅಪಮಾನ ಮಾಡಿದನೆಂದು ಬೇಸತ್ತ ಯುವತಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೆಳವಾಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಬೆಳವಾಡಿಯ ಧನ್ಯ(19) ನೇಣ ಗೆ ಶರಣಾದ ಯುವತಿ. ಮೇಟಗಳ್ಳಿ ಬಡಾವಣೆಯ ಬೀನು ಎಂಬುವವನನ್ನು ಪ್ರೀತಿಸುತ್ತಿದ್ಧ ಯುವತಿ ಮದುವೆಯಾಗುವಂತೆ ಕೇಳಿದ್ದಳು. ಅಲ್ಲದೆ ಆತನನ್ನು ಮನೆಗೆ ಕರೆತರುವಂತೆ ಧನ್ಯ ಪೋಷಕರು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ.

ಅದಕ್ಕಾಗಿ ತನ್ನ ಮನೆಗೆ ಬರುವಂತೆ ಬೀನುವನ್ನು ಆಹ್ವಾನಿಸಿದ್ದ ಪ್ರಿಯತಮೆಗೆ ಅವಾಚ್ಯ ಶಬ್ಧಗಳಿಂದ ಬೈದು ಬೀನು ಅವಮಾನಿಸಿದ. ಧನ್ಯ ಸಹ ಆತನೊಂದಿಗೆ ಜಗಳವಾಡಿದ್ದಳು. ನಂತರ ಆತ ಧನ್ಯ ತಂದೆ ನಡೆಸುತ್ತಿದ್ದ ಅಂಗಡಿ ಮುಂದೆ ನಿಂತು ಜಗಳವಾಡಿ ಅವಾಜ್ ಹಾಕಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತ ಧನ್ಯ, `ನನ್ನ ಸಾವಿಗೆ ನೇರವಾಗಿ ಬೀನುವೇ ಕಾರಣ, ನನ್ನನ್ನು ಬಿಟ್ಟ ಮೇಲೂ ಮನೆ, ಅಂಗಡಿ ಹಾಗೂ ನಾನು ಹೋದಲೆಲ್ಲಾ ಬಂದು ಜಗಳವಾಡುತ್ತಿದ್ದಾನೆ. ಅವಮಾನಕ್ಕೊಳಗಾದ ನಾನು, ನನ್ನ ತಂದೆ-ತಾಯಿಗೂ ಅವಮಾನ ಮಾಡಿರುವುದನ್ನು ಸಹಿಸಿಕೊಳ್ಳಲಾಗದೆ ಇಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಅಪ್ಪ-ಅಮ್ಮನ ಪಾತ್ರ ಇದರಲಿಲ್ಲ. ನಿಮ್ಮ ಮರ್ಯಾದೆ ಹೋಗುವಂತಹ ಕೆಲಸ ಮಾಡಿದ್ದಕ್ಕೆ ಕ್ಷಮಿಸಿ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದಾಳೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆ ಪೊಲೀಸರು, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.