ವೃದ್ಧೆಯಿಂದ ಚಿನ್ನದ ಸರ ಕಳವು: ಆರೋಪಿ ಸೆರೆ

ಮೈಸೂರು: ವೃದ್ಧೆಯೊಬ್ಬರಿಂದ ಚಿನ್ನದ ಸರ ಕಿತ್ತುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಗೌಸಿಯಾನಗರ ನಿವಾಸಿ ಫಯಾಜ್ ಪಾಷಾ ಬಂಧಿತ ಆರೋಪಿ, ಜ.23 ರಂದು ಗೌಸಿಯಾನಗರದ ಅರಳೀಮರದ ಬಳಿ ಸರಸ್ವತಿ ಬ್ಯಾಂಕರ್ಸ್ ಗಿರವಿ ಅಂಗಡಿ ಬಳಿ ಚಿನ್ನದ ಸರ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಗಸ್ತಿನಲ್ಲಿದ್ದ ಉದಯ ಗಿರಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಜಯಕೀರ್ತಿ ಹಾಗೂ ಸಿಬ್ಬಂದಿಯನ್ನು ಕಂಡು ಪರಾರಿ ಯಾಗಲೆತ್ನಿಸಿದ ಆಸಾಮಿಯನ್ನು ಬಂಧಿಸಿದರು. ಠಾಣೆಗೆ ಕರೆತಂದು ವಿಚಾರಿಸಿದಾಗ ಜನವರಿ 22ರಂದು ಕ್ಯಾತಮಾರನಹಳ್ಳಿ ಸಮುದಾಯ ಭವನದ ಮುಂದೆ ಕುಳಿತಿದ್ದ ವೃದ್ಧೆಯೋರ್ವರ ಕತ್ತಿನಲ್ಲಿದ್ದ 20 ಗ್ರಾಂ ಚಿನ್ನದ ಸರವನ್ನು ಬಲವಂತವಾಗಿ ಕಿತ್ತು ಕೊಂಡು ಪರಾರಿಯಾಗಿದ್ದ ಸಂಗತಿ ತಿಳಿಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀ ಸರು, ಚಿನ್ನದ ಸರ ವಶಪಡಿಸಿಕೊಂಡು ಆರೋಪಿ ಫಯಾಜ್ ಪಾಷಾನನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದಾಗ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.