ಮೈಸೂರು: ವೃದ್ಧೆಯೊಬ್ಬರಿಂದ ಚಿನ್ನದ ಸರ ಕಿತ್ತುಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗೌಸಿಯಾನಗರ ನಿವಾಸಿ ಫಯಾಜ್ ಪಾಷಾ ಬಂಧಿತ ಆರೋಪಿ, ಜ.23 ರಂದು ಗೌಸಿಯಾನಗರದ ಅರಳೀಮರದ ಬಳಿ ಸರಸ್ವತಿ ಬ್ಯಾಂಕರ್ಸ್ ಗಿರವಿ ಅಂಗಡಿ ಬಳಿ ಚಿನ್ನದ ಸರ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಗಸ್ತಿನಲ್ಲಿದ್ದ ಉದಯ ಗಿರಿ ಠಾಣೆ ಸಬ್ ಇನ್ಸ್ಪೆಕ್ಟರ್ ಜಯಕೀರ್ತಿ ಹಾಗೂ ಸಿಬ್ಬಂದಿಯನ್ನು ಕಂಡು ಪರಾರಿ ಯಾಗಲೆತ್ನಿಸಿದ ಆಸಾಮಿಯನ್ನು ಬಂಧಿಸಿದರು. ಠಾಣೆಗೆ ಕರೆತಂದು ವಿಚಾರಿಸಿದಾಗ ಜನವರಿ 22ರಂದು ಕ್ಯಾತಮಾರನಹಳ್ಳಿ ಸಮುದಾಯ ಭವನದ…