ಸರ್ಕಾರಿ ಪ್ರಕೃತಿ ಚಿಕಿತ್ಸೆ, ಯೋಗ, ವೈದ್ಯಕೀಯದ 13 ಮಂದಿಗೆ ಪದವಿ ಪ್ರದಾನ

ಮೈಸೂರು: ಮೈಸೂ ರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ 13 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಪತಂಜಲಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬ್ಯಾಚು ಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‍ನಲ್ಲಿ (ಬಿಎನ್‍ವೈಎಸ್) 2013-19ರ ಅವಧಿಯಲ್ಲಿ ಪದವಿ ಪೂರ್ಣಗೊಳಿಸಿದ ಸಂಸ್ಥೆಯ 8ನೇ ಬ್ಯಾಚ್‍ನ 13 ಮಂದಿಗೆ (ಒಟ್ಟು 17 ಮಂದಿಯಲ್ಲಿ ನಾಲ್ವರು ಗೈರು) ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತ ನಾಡಿ, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪದವೀಧರರಿಗೆ ಉತ್ತಮ ಭವಿಷ್ಯ ವಿದ್ದು, ಸಾಂಪ್ರದಾಯಿಕ ಔಷಧದೊಂದಿಗೆ ಆಧುನಿಕ ಔಷಧ ಜ್ಞಾನ ಸಂಯೋಜಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ವ್ಯಾಪಕ ವಾಗಬೇಕು. ಇದರಿಂದ ಸಾಕಷ್ಟು ಕಾಯಿಲೆ ಗಳಿಗೆ ಚಿಕಿತ್ಸೆಯನ್ನು ಪರಿಣಾಮಕಾರಿ ಯಾಗಿ ನೀಡಲು ಹೆಚ್ಚಿನ ಆಯ್ಕೆಗಳು ದೊರೆಯಲಿದೆ. ಪ್ರಾಕೃತಿಕ ಔಷಧ ಮೂಲ ಗಳನ್ನು ಕಂಡುಕೊಳ್ಳಲು ಪ್ರಕೃತಿ ಚಿಕಿತ್ಸೆಯ ಕೋರ್ಸ್‍ಗಳು ಸಹಕಾರಿ ಎಂದು ಹೇಳಿದರು.

ನ್ಯಾಚುರೋಪತಿ ವಲಯದಿಂದ ಔಷಧ ಗುಣವುಳ್ಳ ಸಸ್ಯಗಳ ಶೋಧನೆ ವಿಸ್ತರಿಸಿದರೆ ನಮ್ಮಂತಹ ರಸಾಯನಶಾಸ್ತ್ರಜ್ಞರಿಗೆ ಆ ಸಸ್ಯಗಳ ಔಷಧ ಗುಣದ ನಾನಾ ಮಜಲು ಸಂಶೋಧಿಸಲು ಸಾಧ್ಯವಾಗುತ್ತದೆ. ಜಾಗತೀ ಕರಣದಿಂದಾಗಿ ಇಂದು ಇಡೀ ವಿಶ್ವದಲ್ಲಿ ಅವಕಾಶಗಳು ವಿಸ್ತರಿಸಿದ್ದು, ಇದರ ನಡುವೆ ಸವಾಲುಗಳೂ ಸೃಷ್ಟಿಯಾಗಿವೆ. ಆತ್ಮವಿಶ್ವಾಸ ವಿದ್ದಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥ ವಾಗಿ ಎದುರಿಸಲು ಸಾಧ್ಯವಿದೆ ಎಂಬು ದನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿ ಇಟ್ಟು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವುದೇ ದೇಶದ ಭವಿಷ್ಯವಾದರೂ ಅದು ಯುವ ಸಮುದಾಯದ ಕೈಯಲ್ಲಿದ್ದು, ಹೀಗಾಗಿ ನಮ್ಮ ಯುವ ಜನರು ನಾಯಕತ್ವ ಗುಣ ಬೆಳೆಸಿಕೊಂಡು ತನ್ನ ಸುತ್ತಲಿನ ಜನ ಸಮುದಾಯಕ್ಕೆ ಅಗತ್ಯವಿರುವ ಶಿಕ್ಷಣ ನೀಡ ಬೇಕು. ನಮ್ಮ ದೇಶದಲ್ಲಿ ಗ್ರಾಮೀಣ ಮತ್ತು ನಗರದ ಜನತೆಯ ನಡುವಿನ ಅಂತರ ವನ್ನು ಕಡಿಮೆಗೊಳಿಸಬೇಕಿದೆ. ಸಕಾರಾತ್ಮಕ ಹಾಗೂ ಸುಸಂಸ್ಕøತ ವಾತಾವರಣ ನೆಲೆಸು ವಲ್ಲಿ ನಾವು ಜವಾಬ್ದಾರಿಯುತ ನಾಗರಿಕ ರಾಗಿ ಹೊರಹೊಮ್ಮಬೇಕಿದ್ದು, ಆ ಮೂಲಕ ನಮ್ಮ ದೇಶವನ್ನು ಸದೃಢವಾಗಿ ಕಟ್ಟಬೇಕಿದೆ ಎಂದು ಹೇಳಿದರು.

ಬಡವರಿಗೆ ವೈದ್ಯಕೀಯ ಸೇವೆಗಳು ದೊರೆಯುವಂತೆ ನೋಡಿಕೊಳ್ಳುವುದು ದೇಶದ ಅಭಿವೃದ್ಧಿಗೆ ಅಗತ್ಯ. ಬಡತನ, ಅನಕ್ಷರತೆ ಹಾಗೂ ಅಪರಾಧ ಮುಕ್ತ ದೇಶ ನಮ್ಮದಾಗಲು ನಾವು ಶ್ರಮಿಸ ಬೇಕಿದೆ. ಆ ಮೂಲಕ ಸ್ವಾಸ್ಥ್ಯ, ಶಾಂತ ಹಾಗೂ ಸುಸ್ಥಿರವಾದ ದೇಶವಾಗಿ ಭಾರತ ಹೊರಹೊಮ್ಮಬೇಕಿದೆ ಎಂದರು. ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ, ಜಂಟಿ ನಿರ್ದೇಶಕ ಡಾ.ಬಿ.ಹೆಚ್.ಶ್ರೀಧರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜಿ. ಗೋಪಿನಾಥ್ ಮತ್ತಿತರರು ಹಾಜರಿದ್ದರು.