ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಶಾಸಕ ಜಿಟಿಡಿ

ಕಲಾಪ್ರೇಮಿಯೂ ಆಗಿರುವ ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರು ಮೆರವಣಿಗೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ತಮಟೆ ಸದ್ದಿಗೆ ಸರಿ ಯಾಗಿ ವೀರಭದ್ರ ಕುಣಿತದ ಹೆಜ್ಜೆ ಇಟ್ಟು ಕುಣಿದು ಎಲ್ಲರ ಗಮನ ಸೆಳೆದರು.

ಯಾವುದೇ ಮಹನೀಯರ ಜಯಂ ತೋತ್ಸವದ ಮೆರವಣಿಗೆ ಸಂದರ್ಭ ದಲ್ಲಿ ಜಿ.ಟಿ.ದೇವೇಗೌಡರು ಹೆಜ್ಜೆ ಹಾಕಿ ಕುಣಿಯುವುದು ವಿಶೇಷ. ಅಂತೆಯೇ ಇಂದೂ ಕೂಡ ಅವರು ಜ್ವರ ಇದ್ದರೂ ಹೆಜ್ಜೆ ಹಾಕಿ ತಮಗಿ ರುವ ಕಲಾಪ್ರೇಮವನ್ನು ಪ್ರದರ್ಶಿಸಿದರು.