ಚಿತ್ರಕಲೆ ಮೂಲಕ ಪರಿಸರ ಸಂರಕ್ಷಣೆ ಸಂದೇಶ ಸಾರಿದ ಚಿಣ್ಣರು

ಮೈಸೂರು: ಮೈಸೂರಿನ ರಂಗಾಯಣ ಆವರಣದಲ್ಲಿ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಶನಿ ವಾರ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಚಿತ್ರ ಕಲಾ ಶಿಬಿರದಲ್ಲಿ ನೂರಾರು ವಿದ್ಯಾರ್ಥಿ ಗಳು ಪಾಲ್ಗೊಂಡು, ಪರಿಸರ ಸಂರಕ್ಷಣೆ ಕುರಿತಂತೆ ಚಿತ್ರ ಬರೆದು ಗಮನ ಸೆಳೆದರು.

ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿ, ಜನ ಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆ ಗಳ ನೆರವಿನೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ `ವಾಯು ಮಾಲಿನ್ಯ ತಡೆಗಟ್ಟಿ’ ಶೀರ್ಷಿಕೆಯಲ್ಲಿ ಚಿತ್ರ ಬರೆದರು. ಕರ್ನಾ ಟಕ ರಾಜ್ಯ ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿಯ ಮೈಸೂರು ವಲಯ ಅಧಿಕಾರಿ ಎ.ಉದಯ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅವಿಲಾ ಕಾನ್ವೆಂಟ್, ರಾಯಲ್ ಕಾನ್ ಕಾರ್ಡ್, ಕ್ರೈಸ್ಟ್ ಪಬ್ಲಿಕ್ ಸ್ಕೂಲ್, ಭಗಿನಿ ಸೇವಾ ಸಮಾಜ, ಕೌಟಿಲ್ಯ ವಿದ್ಯಾಲಯ, ಕೇಂದ್ರಿಯ ವಿದ್ಯಾಲಯ ಸೇರಿದಂತೆ 15ಕ್ಕೂ ಹೆಚ್ಚು ಶಾಲೆಯ 120 ಮಂದಿ ವಿದ್ಯಾರ್ಥಿ ಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದರೆ, 35 ಮಂದಿ ಮಕ್ಕಳು ಪ್ರಬಂಧ ಸ್ಪರ್ಧೆ ಯಲ್ಲಿ ತಮ್ಮ ಪ್ರಬುದ್ಧತೆ ಪ್ರದರ್ಶಿಸಿದರು.

ಸ್ಪರ್ಧೆ ಮುಗಿದ ಬಳಿಕ ಎಲ್ಲಾ ವಿದ್ಯಾರ್ಥಿ ಗಳಿಗೆ ಹಿಂದೂಸ್ತಾನ್ ಲೀವರ್ ಲಿಮಿಟೆಡ್, ಮೈಮುಲ್, ನೆಸ್ಲೆ ವತಿಯಿಂದ ಊಟದ ಡಬ್ಬಿ, ನೀರಿನ ಕ್ಯಾನ್, ಲಸ್ಸಿ, ಚಾಕೋ ಲೇಟ್ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಜನ ಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ವಿ.ಎನ್.ಮೂರ್ತಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರಾಧಿಕಾರಿ ಬಿ.ಎಂ. ಪ್ರಕಾಶ್, ಬಿ.ಪಿ.ಗೀತಾ, ಉಪ ಪರಿಸರ ಅಧಿ ಕಾರಿ ಮಂಜುನಾಥ್, ಸಹಾಯಕ ಪರಿಸರಾ ಧಿಕಾರಿ ಸಬಿಕೆ ನೂಬಿಯಾ, ಅಶ್ವಿನಿ ಇದ್ದರು.

ಮೂರು ವಿಭಾಗದಲ್ಲಿ ಸ್ಪರ್ಧೆ: ಚಿತ್ರಕಲಾ ಸ್ಪರ್ಧೆ ಕಿರಿಯ, ಹಿರಿಯ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಪ್ರಬಂಧ ಸ್ಪರ್ಧೆ ಹಿರಿಯ ಮತ್ತು ಪ್ರೌಢಶಾಲಾ ವಿಭಾಗ ದಲ್ಲಿ ನಡೆದಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ.