ಮಲ್ಕುಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಬಿರುಸಿನ ಪ್ರಚಾರ

B. Harshavardhan

ಮಲ್ಕುಂಡಿ: ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಅಭ್ಯರ್ಥಿ ಬಿ.ಹರ್ಷವರ್ಧನ್ ಮತದಾರರಲ್ಲಿ ಮನವಿ ಮಾಡಿದರು.

ಸಮೀಪದ ಹುರ ಜಿಪಂ ವ್ಯಾಪ್ತಿಗೆ ಬರುವ ಯಡಿಯಾಲ, ಮಡುವಿನಹಳ್ಳಿ, ಬಂಕಹಳ್ಳಿ, ಹೊಸವೀಡು, ಹೀರೆಗೌಡನಹುಂಡಿ ಗ್ರಾಮಗಳಿಗೆ ಭೆÉೀಟಿ ನೀಡಿ ಮತ ಯಾಚನೆ ಮಾಡಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯರವರ ಸರ್ಕಾರ ದಲಿತರ ವಿರೋಧಿಯಾಗಿ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಜನಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ನಡೆದ ಉಪಚುನಾವಣೆಯಲ್ಲಿ ಹಣದ ವ್ಯಾಮೋಹದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿಯಿಂದ ಈ ಕ್ಷೇತ್ರಕ್ಕೆ ಯಾವ ಅಭಿವೃದ್ಧಿಯೂ ಆಗಿಲ್ಲ. ಈಗ ನಡೆದಿರುವ ಅಭಿವೃದ್ಧಿ ಕೆಲಸಗಳು ಹಿಂದೆ ಇದ್ದ ಶಾಸಕ ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅವರ ಯೋಜನೆಗಳು. ಈ ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ ಬಿ.ಎಸ್. ಯಡಿಯೂರಪ್ಪರವರ ಕೈಬಲ ಪಡಿಸಬೇಕು ಎಂದು ಕೋರಿದರು. ಕುಂಬರಳ್ಳಿ ಸುಬ್ಬಣ್ಣ, ಕೆಂಡಗಣ್ಣಪ್ಪ, ಜಿಪಂ ಮಾಜಿ ಸದಸ್ಯ ಸಿಂಧುವಳ್ಳಿ ಕೆಂಪಣ್ಣ, ಹೆಮ್ಮರಗಾಲ ಸೋಮಣ್ಣ, ಹುರ ಚಂದ್ರು, ಹಾಡ್ಯ ಶಂಕರ್, ಮಲ್ಕುಂಡಿ ಪುಟ್ಟಸ್ವಾಮಿ, ಮಹೇಶ್ ಅತ್ತಿಕಾನ್, ಎಂ.ಸಿ.ಶ್ರೀನಿವಾಸ್, ಸೂರ್ಯಪ್ರಭ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.