ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಹತ್ಯೆ?

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾ ಜೆಯ ಬಾಲಚಂದ್ರ ಕಳಗಿ ಅವರ ಸಾವು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಇದು ಒಂದು ವ್ಯವಸ್ಥಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ, ಪೊಲೀಸರು ಸೂಕ್ತ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಬಾಲ ಚಂದ್ರ ಕಳಗಿ ಅವರು ತೆರಳುತ್ತಿದ್ದ ಮಾರುತಿ ಓಮಿನಿಗೆ ಲಾರಿ ಡಿಕ್ಕಿಯಾಗಿ ಅವರು ಕೊನೆ ಯುಸಿರೆಳೆದಿದ್ದರು. ಈ ಘಟನೆಯ ಬಗ್ಗೆ ಅವರ ಕುಟುಂಬಸ್ಥರು ಮತ್ತು ಸಂಪಾಜೆ ಜನತೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದ ರಿಂದ ಕಳಗಿ ಸಾವಿನ ಪ್ರಕರಣದ ಬಗ್ಗೆ ಬಿಜೆಪಿಗೂ ಸಂಶಯ ಮೂಡಿದ್ದು, ಪೊಲೀ ಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಯನ್ನು ಚುರುಕುಗೊಳಿಸಬೇಕೆಂದು ಒತ್ತಾ ಯಿಸಿದರು. ಲಾರಿ ಚಾಲಕನನ್ನು ತಡವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಲಾರಿ ಬ್ರೇಕ್‍ನಲ್ಲಿ ಸಮಸ್ಯೆ ಇತ್ತು ಎಂದು ಆತ ಹೇಳಿಕೆ ನೀಡಿದ್ದು, ಇದನ್ನು ನಂಬಲು ಸಾಧ್ಯವಿಲ್ಲವೆಂದು ತಿಳಿಸಿದ ಭಾರತೀಶ್, ತಕ್ಷಣ ಪೊಲೀಸರು ತನಿಖೆಯನ್ನು ನಡೆಸಿ ಸತ್ಯಾಂಶ ಹೊರತರಬೇಕು ಎಂದರು.

ಸಂಪಾಜೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಬಾಲ ಚಂದ್ರ ಕಳಗಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಕಳಗಿ ಅವರಿಗೆ ಬೆದ ರಿಕೆ ಕರೆಗಳು ಕೂಡ ಬರುತ್ತಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದು, ಸಮಗ್ರ ತನಿಖೆಯಿಂದಷ್ಟೆ ಸತ್ಯ ಹೊರ ಬರಲು ಸಾಧ್ಯವೆಂದು ಭಾರತೀಶ್ ಹೇಳಿದರು.

ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷÀ ತಳೂರು ಕಿಶೋರ್ ಕುಮಾರ್ ಮಾತ ನಾಡಿ, ಸಂಪಾಜೆ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಬಾಲ ಚಂದ್ರ ಕಳಗಿ ಅವರು ಧ್ವನಿ ಎತ್ತುತ್ತಲೇ ಇದ್ದರು ಎಂದರಲ್ಲದೆ, ಮಡಿಕೇರಿಗೆ ಬರಲು ಉತ್ತಮ ಮಾರ್ಗವಿದ್ದರೂ ಕಳಗಿ ಅವರು ತೆರಳು ತ್ತಿದ್ದ ಮಾರ್ಗವನ್ನೇ ಲಾರಿ ಚಾಲಕ ಅವ ಲಂಬಿಸಿದ ಬಗ್ಗೆಯೂ ಸಂಶಯಗಳಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ರಾಬಿನ್ ದೇವಯ್ಯ, ವಿ.ಕೆ.ಲೋಕೇಶ್, ಜಿಲ್ಲಾ ವಕ್ತಾರ ನಾಪಂಡ ಕಾಳಪ್ಪ ಹಾಗೂ ಮಡಿಕೇರಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಕೋಡಿರ ಪ್ರಸನ್ನ ಉಪಸ್ಥಿತರಿದ್ದರು.