ಕುಶಾಲನಗರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ನಗದು, ವಾಹನ ವಶ, ಜೂಜುಗಾರರ ಮೇಲೆ ಕೇಸು ದಾಖಲು

ಕುಶಾಲನಗರ: ಕುಶಾಲನಗರ ಸೇರಿದಂತೆ ಕೂಡಿಗೆ, ಗುಡ್ಡೆ ಹೊಸೂರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸ್ಥಳಗಳಿಗೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಇದಕ್ಕೆ ಸಂಬಂಧಿಸಿದಂತೆ ಹಲವು ವಾಹನಗಳನ್ನು ಹಾಗೂ ಜೂಜಿಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ. ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮತ್ತು ಕಾರ್ಯಾ ಚರಣೆ ತಂಡ ಕೂಡಿಗೆ ಮತ್ತು ಗುಡ್ಡೆಹೊಸೂರು ಬಳಿ ಅಕ್ರಮ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ದಾಳಿ ಮಾಡಿದ್ದಾರೆ.

ಕೂಡಿಗೆಯಲ್ಲಿ ಸೈನಿಕ ಶಾಲೆ ಹಿಂಭಾಗ ದಾಳಿ ಮಾಡಿದ ಸಂದರ್ಭ ಆರೋಪಿಗಳಾದ ಕೆ.ಪಿ.ಕಿರಣ್, ಎಚ್.ಕೆ.ರಘು, ಜೆ.ಕಿರಣ್, ಪ್ರಶಾಂತ್, ಬೋಪಯ್ಯ, ಮುರಳಿ, ಲೋಕೇಶ್, ಅರಸು ಎಂಬುವರನ್ನು ವಶಕ್ಕೆ ಪಡೆದಿದ್ದು, ಎರಡು ಆಟೋ ರಿಕ್ಷಾ, ಒಂದು ಬೈಕ್, ಮೂರು ಮೊಬೈಲ್ ಮತ್ತು ಅಲ್ಪ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಗುಡ್ಡೆಹೊಸೂರು ವ್ಯಾಪ್ತಿಯ ಕಾವೇರಿ ಹೊಳೆ ಬದಿಯಲ್ಲಿ ಜೂಜಾ ಡುತ್ತಿದ್ದ ಗಣೇಶ, ಅನಿ, ಸತೀಶ, ರಹಮತುಲ್ಲಾ, ರವಿ, ಆಶಿಕ್, ಹರ್ಷ ಎಂಬುವರುಗಳನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿದ್ದ ನಗದು, ಒಂದು ಆಟೋ ರಿಕ್ಷಾ, ಸ್ವಿಫ್ಟ್ ಕಾರು ಮತ್ತು ಒಂದು ಬೈಕ್ ವಶ ಪಡಿಸಿಕೊಂಡಿ ದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ಸಿಐ ದಿನೇಶ್ ಕುಮಾರ್, ಗ್ರಾಮಾಂತರ ಠಾಣೆ ಎಸ್‍ಐ ನಂದೀಶ್, ಪ್ರಭಾರ ಎಸ್‍ಐ ಅರ್ಚನಾ, ಸ್ಥಳೀಯ ಅಪರಾಧ ಪತ್ತೆ ಕಾರ್ಯಾಚರಣೆ ತಂಡದ ಬಿ.ಎಸ್. ದಯಾನಂದ, ಸಜಿ, ಎ.ಎಸ್.ಜೋಸೆಫ್, ಪ್ರಕಾಶ್, ಸುರೇಶ್, ಪ್ರವೀಣ್, ಮಂಜು, ಉದಯ, ನಾಗರಾಜ್ ಪಾಲ್ಗೊಂಡಿದ್ದರು. ಕಳೆದ 4 ದಿನ ಗಳಿಂದ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ, ಇಸ್ಪೀಟ್ ಅಡ್ಡೆಗಳು, ಗಾಂಜಾ ಮಾರಾಟದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಿ ದಾಳಿ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿದೆ.