ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಸಾ.ರಾ.ಮಹೇಶ್ ನೇಮಕ

ಮೈಸೂರು, ಅ.11- ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ನೇಮಕವಾಗಿದ್ದಾರೆ. ಶಾಸಕರಾದ ಹಾಸನದ ಪ್ರೀತಮ್ ಜೆ.ಗೌಡ, ಎಂ.ಎಸ್.ಸೋಮಲಿಂಗಪ್ಪ, ಬಸವರಾಜ್ ದಡ್ಡೇಸೂಗೂರ್, ಸುನೀಲ್ ಬಿಳಿಯಾ ನಾಯ್ಕ, ಕೆ.ಬಿ.ಅಶೋಕ್ ನಾಯ್ಕ್, ರಾಮಪ್ಪ ಸೋಬೆಪ್ಪ ಲಮಾಣಿ, ಪರಣ್ಣ ಈಶ್ವರಪ್ಪ ಮುನವಳ್ಳಿ, ಎಸ್.ಭೀಮಾ ನಾಯ್ಕ್, ಟಿ.ರಘುಮೂರ್ತಿ, ರಹೀಂಖಾನ್, ಗಣೇಶ್ ಪ್ರಕಾಶ್ ಹುಕ್ಕೇರಿ, ಆರ್.ಅಖಂಡ ಶ್ರೀನಿವಾಸಮೂರ್ತಿ ಹಾಗೂ ಎಂ.ಶ್ರೀನಿವಾಸ್ ಸಮಿತಿ ಸದಸ್ಯರಾಗಿದ್ದಾರೆ.