ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ನನ್ನ ವಿರೋಧವಿದೆ

ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಸರ್ಕಾರದ ಪ್ರಸ್ತಾಪಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿದ ಮಾಜಿ ಮುಖ್ಯಮಂತ್ರಿಗಳೂ ಆದ ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈ ಪ್ರಸ್ತಾಪದ ವಿರುದ್ಧ ಈ ಹಿಂದೆಯೇ ದನಿ ಎತ್ತಿದ್ದೆ. ಈಗಲೂ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಮಾತ ನಾಡುವುದಾಗಿ ತಿಳಿಸಿದರು.

ಮೈಸೂರಿನ ರಾಮಕೃಷ್ಣನಗರದಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಸ್ಥಾಪನೆಗೊಂಡಿರುವ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮ ಆರಂ ಭಿಸಲು ನನ್ನ ವಿರೋಧವಿದ್ದು, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು ಎಂದು ಹೇಳಿದರು.

ನಮ್ಮ ಮೈತ್ರಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವು ದಾಗಿ ಹೇಳಿದಾಗಲೇ ಇದು ಸರಿಯಲ್ಲ ಎಂದು ತಿಳಿಸಿದ್ದೆ. ಆಗ ಪ್ರಾಥಮಿಕ ಶಿಕ್ಷಣ ಸಚಿವ ರಾಗಿದ್ದ ಎನ್.ಮಹೇಶ್ ಅವರಿಗೂ ಇದಕ್ಕೆ ಕೈ ಹಾಕದಂತೆ ಸೂಚನೆ ನೀಡಿದ್ದೆ. ಈ ವಿಷಯವನ್ನು ಸಂಪುಟಕ್ಕೂ ತರಬಾರ ದೆಂದು ನಿರ್ದೇಶನ ಸಹ ನೀಡಿದ್ದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಪೋಷಕರಲ್ಲೂ ಹೇಗಾದರೂ ಮಾಡಿ ತಮ್ಮ ಮಕ್ಕ ಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಬೇ ಕೆಂಬ ವ್ಯಾಮೋಹ ಇಂದು ಉಂಟಾಗಿದೆ. ಆದರೆ ಈ ಬೆಳವಣಿಗೆ ಸರಿಯಲ್ಲ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿತರೇ ಯಾವುದೇ ತೊಡಕಿಲ್ಲ. ಯಾವುದೇ ಭಾಷೆ ಕಲಿಯಬೇಕಾದರೂ ಅಡ್ಡಿಯಿಲ್ಲ. ಆದರೆ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು. ಹಾಗಾದರೆ ಮಾತ್ರವೇ ವಿದ್ಯಾರ್ಥಿ ಗಳ ಜ್ಞಾನ ವೃದ್ಧಿ ಸಾಧ್ಯ. ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಮಾಧ್ಯಮದಲ್ಲೇ ಆಗುವುದು ಸೂಕ್ತ ಎಂದು ಭಾಷಾ ತಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ ಎಂದು ವಿವರಿಸಿದರು.

ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ, ಆಯಾಯ ರಾಜ್ಯಗಳ ಮಾತೃಭಾಷೆ ಮಾಧ್ಯ ಮಕ್ಕೆ ಅವಕಾಶ ನೀಡಿ ಇಡೀ ದೇಶದಲ್ಲಿ ಎಲ್ಲರಿಗೂ ಏಕರೂಪದ ಶಿಕ್ಷಣ ನೀಡು ವುದು ಅಗತ್ಯ. ಇದರಿಂದ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಕಡಿಮೆ ಮಾಡಲು ಸಾಧ್ಯವಿದೆ. ಜಾತಿ ವಿನಾಶಕ್ಕೂ ಇದು ಎಡೆಮಾಡಿಕೊಡಲಿದೆ. ಯಾವುದೇ ಸಾಮಾಜಿಕ ವ್ಯವಸ್ಥೆಗೆ ಚಲನೆ ಇಲ್ಲವಾದರೆ ಅಲ್ಲಿ ಬದಲಾವಣೆ ಕಾಣ ಲಾಗದು ಎಂದು ವಿಶ್ಲೇಷಿಸಿದರು.

ಪ್ರಾಥಮಿಕ ಶಿಕ್ಷಣದ ಮಾಧ್ಯಮ ಆಯ್ಕೆ ಮಾಡಿಕೊಳ್ಳುವುದು ಪೋಷಕರಿಗೆ ಬಿಟ್ಟ ವಿಚಾರವೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಮಾತೃಭಾಷೆ ಕಡ್ಡಾಯಗೊಳಿ ಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಕೊನೆಗೂ ಸಾಧ್ಯವೇ ಆಗಲಿಲ್ಲ. ಸುಪ್ರಿಂ ಕೋರ್ಟ್ ತೀರ್ಪು ಬಂದ ಬಳಿಕ ಮೋದಿ ಯವರಿಗೆ ಪತ್ರ ಬರೆದು ಎಲ್ಲಾ ರಾಜ್ಯಗಳ ಸಿಎಂಗಳ ಸಭೆ ಕರೆಯುವಂತೆ ಮನವಿ ಮಾಡಿದ್ದೆ. ಖುದ್ದು ಭೇಟಿ ಮಾಡಿದ್ದರೂ ಪ್ರಯೋಜನವೇ ಆಗಿಲ್ಲ. ಮಾತೃಭಾಷೆ ಕಡ್ಡಾಯಗೊಳಿಸಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಾಗುತ್ತದೆ. ಈ ಅಧಿಕಾರ ಇರುವುದು ಸಂಸತ್ತಿಗೆ. ಹೀಗಾಗಿ ಕೇಂದ್ರ ಸರ್ಕಾರವೇ ಮನಸ್ಸು ಮಾಡಬೇಕು ಎಂದರು.

ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ನನಗೆ ಸ್ಪಷ್ಟತೆ ಇದ್ದು, ಅಂತರ ರಾಜ್ಯದ ಯಾವುದೇ ವಿಚಾರವಿದ್ದರೂ ರಾಜ್ಯದ ಪರ ವಾಗಿ ಕನ್ನಡಿಗರ ಹಕ್ಕು ರಕ್ಷಣೆ ಮಾಡುವ ಬದ್ಧತೆ ಹೊಂದಿದ್ದೇನೆ. ಅಧಿಕಾರ ಇರಲಿ ಇಲ್ಲದಿರಲಿ, ರಾಜ್ಯದ ಜನತೆ ಪರವಾಗಿ ಇರು ತ್ತೇನೆ. ಸ್ವಾಭಿಮಾನಿಗಳಿಗೆ ನಾನು ಸ್ವಾಭಿ ಮಾನಿಯಂತೆ ಕಾಣುತ್ತೇನೆ. ಸೋಗಲಾಡಿ ಗಳಿಗೆ, ನಿರಭಿಮಾನಿಗಳಿಗೆ ನಾನು ದುರಂ ಹಕಾರಿಯಂತೆಯೇ ಕಾಣುತ್ತೇನೆ. ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಭಾಷೆ ಹೊರಟಾಗಿ, ನೇರವಾಗಿಯೇ ಇರುತ್ತದೆ. ನನ್ನ ಸ್ವಾಭಿಮಾನವನ್ನೇ ದುರಹಂಕಾರ ಎನ್ನು ವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ ಮಾತನಾಡಿ, ನೇರವಾಗಿ ಮಾತ ನಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಲವರು ದುರಹಂಕಾರಿ ಎನ್ನು ತ್ತಾರೆ. ಸಿದ್ದರಾಮಯ್ಯ ಅವರ ಸಿಟ್ಟು ಸಾತ್ವಿಕ ವಾದದ್ದು. ಯಥಾಸ್ಥಿತಿ ಹಾಗೂ ಮೂಲ ಭೂತವಾದಿಗಳಿಗೆ ಇದು ಹಿಡಿಸುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ನುಂಗ ಲಾರದ ತುತ್ತಾಗಿದ್ದಾರೆ. 13 ಬಜೆಟ್ ಮಂಡಿ ಸಿರುವ ಸಿದ್ದರಾಮಯ್ಯಗೆ ಅವರೇ ಸಾಟಿ ಎಂದು ಅಭಿಮಾನ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಯಲ್ಲೇ ನೀಡಬೇಕು ಎಂಬುದು ಜಾಗತಿಕ ಸತ್ಯ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಮಾಡುತ್ತಿರುವುದು ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಆಯ್ದ ಶಾಲೆಗಳಲ್ಲಿ ಮಾಧ್ಯಮ ಶಿಕ್ಷಣ ಆರಂಭಿಸಿದರೆ ಇತರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತದೆ. ಆಗ ಶಾಲೆ ಯನ್ನು ಮುಚ್ಚಬೇಕಾಗುತ್ತದೆ. ಬೇರೆಡೆಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಪೆÇೀಷಕರು ಒಪ್ಪುವುದಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ನಮ್ಮ ಹೊಸ ಕಾಲೇಜಿನ ವಿe್ಞÁನ ವಿಭಾಗಕ್ಕೆ ದಾವಣ ಗೆರೆಯಿಂದ ಓರ್ವ ಮುಸ್ಲಿಂ ವಿದ್ಯಾರ್ಥಿ, ಬೆಂಗಳೂರಿನ ಇಬ್ಬರು ಹೆಣ್ಣು ಮಕ್ಕಳು ಪ್ರವೇ ಶಾತಿ ಪಡೆದಿದ್ದಾರೆ. ವಾಣಿಜ್ಯ ವಿಭಾಗಕ್ಕೆ 6 ಮಂದಿ ಪ್ರವೇಶಾತಿ ಪಡೆದಿದ್ದಾರೆ. ಈ ಸಲ ಎಲ್ಲರಿಗೂ ಸರ್ಕಾರಿ ಶುಲ್ಕ 1700 ರೂ. ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯು ವುದಿಲ್ಲ ಎಂದರು. ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ, ಖಜಾಂಚಿ ನಾ.ನಾಗಚಂದ್ರ, ಧರ್ಮದರ್ಶಿಗಳಾದ ಎಂ.ಬಿ.ವಿಶ್ವನಾಥ್, ನಂದಾ ಹಳೇಮನೆ, ನೂತನ ಕಾಲೇಜಿನ ಪ್ರಾಂಶುಪಾಲ ಡಾ. ಭದ್ರಪ್ಪ ಶಿ.ಹೆನ್ಲಿ ಮತ್ತಿತರರು ಹಾಜರಿದ್ದರು.

ಸಿದ್ದರಾಮಯ್ಯ ಸಮ್ಮುಖದಲ್ಲಿ ಅರಸು ಬಗ್ಗೆ ವಿವಾದಾತ್ಮಕ ಹೇಳಿಕೆ!
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಡಿ.ದೇವರಾಜ ಅರಸು ಅವರ ಬಗ್ಗೆ ಹಿರಿಯ ಹೋರಾಟಗಾರ ಪ.ಮಲ್ಲೇಶ್ ಟೀಕಾಪ್ರಹಾರ ನಡೆಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡಿದ ಪ್ರಸಂಗ ನಡೆಯಿತು. ದೇವರಾಜ ಅರಸು ಸಿಎಂ ಆಗಿದ್ದ ವೇಳೆ ಪ್ರತಿಯೊಬ್ಬ ಲೆಜಿಸ್ಲೇಟಿವ್ ಆಫೀಸರ್ಸ್ ರೂಂಗೆ 5 ಸಾವಿರ ರೂ. ಲಂಚ ಹೋಗುತ್ತಿತ್ತು. ಇನ್ನು ಅರಸು ಅವರ ಅವಧಿಯಲ್ಲಿ ರಾಜ್ಯಕ್ಕೆ `ಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ಇದಕ್ಕೆ ಸಾವಿರಾರು ಕನ್ನಡಾಭಿಮಾನಿಗಳ ಹೋರಾಟದ ಪರಿಶ್ರಮವಿದೆ. ಸಿಎಂ ಆಗಿದ್ದರು ಎಂಬ ಒಂದೇ ಕಾರಣಕ್ಕೆ ಎಲ್ಲಾ ಶ್ರೇಯಸ್ಸು ಅವರಿಗೆ ಸಲ್ಲಿಸಲಾಗುತ್ತಿದ್ದು, ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಭೂ ಸುಧಾರಣೆ ಕಾಯ್ದೆ ಜಾರಿಗೊಳ್ಳಲು ಸಮಾಜವಾದಿ ಹೋರಾಟವೇ ಕಾರಣ. ಇದು ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಗೊತ್ತು. ಆದರೆ ಮಾತೆತ್ತಿದರೆ ಎಲ್ಲದಕ್ಕೂ ದೇವರಾಜ ಅರಸು ಕಾರಣ ಎನ್ನುತ್ತಾರೆ. ಇದೆಲ್ಲಾ ಗೊತ್ತಿದ್ದು ಮಾಜಿ ಸಿಎಂ ಸಿದ್ದ ರಾಮಯ್ಯ, ಡಾ.ಹೆಚ್.ಸಿ.ಮಹದೇವಪ್ಪ ಅವರು ದೇವರಾಜ ಅರಸು ಅವರನ್ನು ಏಕೆ ಹಾಡಿ ಹೊಗಳುತ್ತಾರೆ ಎಂಬುದೇ ಅರ್ಥವಾಗದು ಎಂದರಲ್ಲದೆ, ಸಿದ್ದರಾಮಯ್ಯ ಅವರನ್ನು ಅರಸುಗೆ ಹೋಲಿಸುವುದು ಸರಿಯಲ್ಲ. ಸಿದ್ದರಾಮಯ್ಯ ಓರ್ವ ಮುತ್ಸದ್ಧಿ. ಎಸ್.ನಿಜಲಿಂಗಪ್ಪ ಬಿಟ್ಟರೆ ಮುತ್ಸದ್ಧಿ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಜಾರಿ ಮಾಡಲು ಉದ್ದೇಶಿಸಿರುವುದನ್ನು ಖಂಡಿಸಿದ ಪ.ಮಲ್ಲೇಶ್, ಸಿದ್ಧಾಂತ ಇಲ್ಲದ ಸರ್ಕಾರಗಳು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಕಿಡಿಕಾರಿದರಲ್ಲದೆ, ಸಿದ್ದರಾಮಯ್ಯ ಅವರು ಈ ಬಗ್ಗೆ ಚಕಾರವೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದನ್ನು ವಿರೋಧಿಸಿದ ಮೊಟ್ಟಮೊದಲಿಗ ನಾನು ಎಂದು ಹೇಳಿದರು.

ನಾನು ಯಾವುದೇ ಜಾತಿ, ಧರ್ಮದ ವಿರೋಧಿಯಲ್ಲ
ಮೈಸೂರು: ನಾನು ಯಾವುದೇ ಜಾತಿ-ಧರ್ಮದ ವಿರೋಧಿ ಯಲ್ಲ. ಆದರೆ ನನಗೆ ಹಿಂದೂ ಧರ್ಮ ಮತ್ತು ಲಿಂಗಾಯತ ಸಮುದಾಯದ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ರಾಮಕೃಷ್ಣನಗರದಲ್ಲಿ ಬುಧವಾರ ಮಾತನಾಡಿದ ಅವರು, ಮೌಢ್ಯಗಳ ವಿರುದ್ಧ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಮುಂದಾದರೆ, ಹಿಂದೂ ಧರ್ಮದ ವಿರೋಧಿ ಎಂದು ಕರೆದರು. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಕ್ರಮ ವಹಿಸಿ ಎಂದು ಕೇಳಿ ಕೊಂಡವರು ಅದೇ ಸಮುದಾಯದವರು. ಆದರೆ ನಾನು ಲಿಂಗಾಯತ ಸಮು ದಾಯದ ವಿರೋಧಿ ಎಂದು ಅಪಪ್ರಚಾರ ಮಾಡಲಾಯಿತು ಎಂದರು.