ಬೆಂಗಳೂರಿನ ಗುತ್ತಿಗೆದಾರ ಮೈಸೂರಲ್ಲಿ ನಿಗೂಢ ಕಣ್ಮರೆ

ಮೈಸೂರು: ಬೆಂಗಳೂರಿನ ಗುತ್ತಿಗೆದಾರ ರೊಬ್ಬರು ಮೈಸೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ ಗುತ್ತಿಗೆದಾರ ಡಿ.ಗೋಪಾಲಕೃಷ್ಣ (44) ನಿಗೂಢವಾಗಿ ಕಣ್ಮರೆಯಾದವರಾಗಿದ್ದು, ಇವರು ಮೈಸೂರಿನ ರೈಲ್ವೆಯಲ್ಲಿ ಟೆಂಡರ್ ಪಡೆಯಲೆಂದು 2-3 ತಿಂಗಳಿಂದ ಬೆಂಗ ಳೂರಿನಿಂದ ಮೈಸೂರಿಗೆ ಆಗಾಗ ಬರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಟೆಂಡರ್ ಪಡೆಯಲು ಅವರು ಸಾಕಷ್ಟು ಹಣವನ್ನು ಯಾರಿಗೋ ಕೊಟ್ಟಿರು ವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಿರುವ ಅವರ ಪತ್ನಿ ಎಂ.ಸುಮತಿ, ತನಗೆ ಟೆಂಡರ್ ಪ್ರತಿ ದೊರೆಯಲಿದೆ ಎಂದು ತಿಳಿಸಿ ಮೇ 27ರಂದು ಮೈಸೂರಿಗೆ ಗೋಪಾಲಕೃಷ್ಣ ಬಂದಿದ್ದರು ಎಂದಿ ದ್ದಾರೆ. ಅಂದು ತನಗೆ ಮೊಬೈಲ್ ಕರೆ ಮಾಡಿದ ಪತಿ ಮೈಸೂರಿನ ರೈಲ್ವೆ ಕಚೇರಿಗೆ ತೆರಳುತ್ತಿ ರುವುದಾಗಿಯೂ, ಆ ವೇಳೆ ಫೋನ್ ಸ್ವಿಚ್ ಆಫ್ ಆಗಿರುತ್ತದೆ ಎಂದು ತಿಳಿಸಿದ್ದರು.

ಮರುದಿನ ಬೇರೆ ಸಂಖ್ಯೆಯಿಂದ ಕರೆ ಮಾಡಿದ ಪತಿ, ತನ್ನ ಫೋನ್ ಕಳೆದು ಹೋಗಿರುವು ದಾಗಿಯೂ ಎಲ್ಲಾ ವಿಷಯವನ್ನೂ ಬೆಂಗ ಳೂರಿಗೆ ಬಂದ ನಂತರ ಹೇಳುವುದಾಗಿಯೂ ತಿಳಿಸಿದ್ದರು. ನಂತರ ಈವರೆಗೆ ಅವರು ಮನೆಗೆ ವಾಪಸ್ಸಾ ಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈತನ ಬಗ್ಗೆ ಮಾಹಿತಿ ಇರುವವರು ಮಂಡಿ ಪೊಲೀಸ್ ಠಾಣೆ ದೂ. 0821-2418313 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿ ಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.