ಬೆಂಗಳೂರು: ಭಾರೀ ಸಂಖ್ಯೆಯ ಅರ್ಹ ಮತದಾರರು ಮತದಾನ ಕೇಂದ್ರಗಳಿಗೆ ಹೋದಾಗ ಮತಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಕಂಡು ಆತಂಕಿತರಾಗಿದ್ದಾರೆ. ಹಲವಾರು ಜನರು ಈ ಬಗ್ಗೆ ದೂರು ಸಲ್ಲಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗವು ಹೆಸರುಗಳ ನಾಪತ್ತೆ ಕುರಿತಂತೆ ವಿಚಾರಣೆಗೆ ಆದೇಶ ನೀಡಿದೆ. ನೂರಾರು ಜನರು ತಮ್ಮ ಹೆಸರನ್ನು ಯಾವ ಕಾರಣಕ್ಕಾಗಿ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವುದನ್ನೇ ತಿಳಿಯದೆ ಮತದಾನ ಮಾಡಲೂ ಅವಕಾಶವಿಲ್ಲದೆ ನಿರಾಸೆಯಿಂದ ಹಿಂತಿರುಗಬೇಕಾಗಿ ಬಂದಿತ್ತು. ಗುರುವಾರ (ಏ.18)ರಂದು ಕರ್ನಾಟಕ ದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು ಆ ದಿನ ಇಂತಹ ಸಾವಿರಾರು ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವುದು ಕಂಡು ಬಂದಿದೆ.
ನಾವು ವಿಚಾರಣೆಗೆ ಆದೇಶಿಸಿದ್ದೇವೆ. ಆದರೆ ಮೊದ ಲನೆಯದಾಗಿ, ಇದು ಈ ವರ್ಷ ಆದ ಅಚಾ ತುರ್ಯವಲ್ಲ. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸ ರನ್ನು ತೆಗೆದು ಹಾಕಲು ಹಾಗೂ ಸೇರಿಸಲು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು. ಹಾಗಾಗಿ ಅರ್ಜಿ ಸಲ್ಲಿಸಿ ದವರ ವಿಚಾರಣೆ ಬಳಿಕವೇ ಅವರ ಹೆಸರನ್ನು ಪಟ್ಟಿ ಯಿಂದ ಅಳಿಸಲಾಗುವುದು ಮುಖ್ಯ ಚುನಾವಣಾ ಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಪಟ್ಟಿಯಲ್ಲಿ ಹಲವರ ಹೆಸರು ನಾಪತ್ತೆಯಾಗಿದ್ದರ ಕುರಿತು ಮಾತ್ರ ದೂರು ನೀಡಿದ್ದರೂ, ಈ ಸಮಸ್ಯೆ ಯನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾ ಗಿದೆ. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರಹ್ಲಾದ್ ದೂರಿನ ಆಧಾರದ ಮೇಲೆ ಸಿಇಓ ಕಚೇರಿಯು ಜಿಲ್ಲಾ ಚುನಾವಣಾಧಿಕಾರಿ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ (ಬಿಬಿಎಂಪಿ) ಕಮೀಷನರ್ಗಳಿಗೆ ನೋಟೀಸ್ ನೀಡಿದೆ. ಸರಿಯಾದ ವಿಧಾನವನ್ನು ಅನುಸರಿಸದೆ ಯಾವುದೇ ಹೆಸರುಗಳನ್ನು ಅಳಿಸ ಲಾಗಿಲ್ಲ ಎಂದು ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಆಯೋಗದ ನಿರ್ದೇಶನಗಳ ಪ್ರಕಾರ ಕಟ್ಟುನಿಟ್ಟಾಗಿ ಮಾಡಲ್ಪಟ್ಟಿದೆ ಮತ್ತು ಮತ ದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಬೂತ್ ಮಟ್ಟದ ಅಧಿಕಾರಿಗಳು ವಿವರಗಳನ್ನು ಸಂಗ್ರಹಿಸಲು ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿದ್ದಾರೆ ಎಂದರು.
ಮನೆಗಳನ್ನು ಬದಲಾಯಿಸುವ ಜನರು ಒಂದು ನಿರ್ದಿಷ್ಟ ಮತಗಟ್ಟೆಯಲ್ಲಿ ಮೊದಲು ಮತ ಚಲಾ ಯಿಸಿದ್ದರೆ ಅವರ ಹೆಸರು ಇನ್ನೂ ಹಳೆ ಮತದಾ ರರ ಪಟ್ಟಿಯಲ್ಲಿದೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ. ಆದರೆ ಹೊಸ ನಿವಾಸಿಗಳು ವ್ಯಕ್ತಿಯು ಅಲ್ಲಿ ವಾಸಿಸುವುದಿಲ್ಲ ಎಂದು ಹೇಳಿಕೆ ನೀಡಿದರೆ, ಅಂತಹ ಹೆಸರುಗಳ ನಾಪತ್ತೆಗೆ ಕಾರಣವೇನು ಎಂದು ವಿಚಾರಣೆ ಬಳಿಕವಷ್ಟೇ ಹೇಳಲಾಗುತ್ತದೆ ಜನರು ತಮ್ಮ ಹೆಸರುಗಳನ್ನು ಸೇರಿಸಲು ಚುನಾವಣಾ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸಿಕೊಳ್ಳಬೇಕು. ಮತದಾನದ ದಿನ ಬೆಂಗಳೂರಿನ ದಕ್ಷಿಣ, ಮಧ್ಯ ಮತ್ತು ಉತ್ತರ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರು ಚುನಾವಣಾ ಮತಪಟ್ಟಿಯಿಂದ ಕಾಣೆಯಾಗಿದೆ. ಈ ಕುರಿತು ಚುನಾವಣಾ ಆಯೋಗ ತನಿಖೆ ಕೈಗೊಳ್ಳಬೇಕೆಂದು ಮಾಜಿ ಡಿಸಿಎಂ ಆರ್.ಅಶೋಕ್ ಸಹ ಆಗ್ರಹಿಸಿದ್ದಾರೆ. ಮತದಾರರ ಹೆಸರು ಅಳಿಸಿ ಹಾಕುವುದರ ಹಿಂದೆ ಕೆಲ ಅಧಿಕಾರಿಗಳ ಕೈವಾಡವಿದೆ ಎಂದು ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಈ ಸಂಬಂಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಬಿಜೆಪಿ ಚಿಂತನೆ ನಡೆಸಿದೆ.