ಕೆಸಿಎನ್ ಗೆಲುವು: ಹೊಳೆ ಆಂಜನೇಯನಿಗೆ 101 ಈಡುಗಾಯಿ

ಮದ್ದೂರು, ಡಿ.9- ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆದ್ದರೆ 101 ತೆಂಗಿನ ಕಾಯಿ ಹೊಡೆಯಲಾಗುವುದು ಎಂದು ಹರಕೆ ಕಟ್ಟಿಕೊಂಡು, ಹರಕೆ ಈಡೇರಿದ ಹಿನ್ನೆಲೆಯಲ್ಲಿ ಮನ್‍ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹಾಗೂ ಅವರ ಬೆಂಬಲಿಗರು ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುದಲ್ಲಿ ಈಡುಗಾಯಿ ಹೊಡೆದರು.

ಈ ವೇಳೆ ಮಾತನಾಡಿದ ಅವರು, ನಾರಾಯಣಗೌಡರು ಉಪ ಚುನಾವಣೆಯಲ್ಲಿ ಜಯಶೀಲರಾದರೆ ಪಟ್ಟಣದ ಹೊಳೆ ಆಂಜ ನೇಯಸ್ವಾಮಿಗೆ 101 ತೆಂಗಿನ ಕಾಯಿ ಈಡುಗಾಯಿ ಹೊಡೆಯುತ್ತೇನೆಂದು ಹರಕೆ ಕಟ್ಟಿಕೊಳ್ಳಲಾಗಿತ್ತು, ಹರಕೆ ಈಡೇರಿದ ಹಿನ್ನೆಲೆಯಲ್ಲಿ ಹರಕೆ ತೀರಿಸಲಾಗಿದೆ ಎಂದರು.

ಮುಂದಿನ ಮೂರೂವರೆ ವರ್ಷದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಎಲ್ಲ ವರ್ಗದ ಜನರಿಗೂ ಅನುಕೂಲ ವಾಗುವ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಚಾಮನಹಳ್ಳಿ ಸಿ.ಕೆ.ಸ್ವಾಮಿಗೌಡ, ಮನು, ಮೋಹನ್, ಕಿಟ್ಟಿ, ಲಿಂಗರಾಜು, ವಿನಯ್, ಮಧು ಇತರರಿದ್ದರು.