13 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸಿದ್ಧತೆ

ಹಾಸನ: ಈ ಬಾರಿ ಕಟಾವು ಮಾಡಲಾದ 13 ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್.ಪ್ರಕಾಶ್ ಕಮ್ಮರಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಮುಖ ಆಹಾರ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆ ಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು, ಸೋಯಾ, ಸೂರ್ಯಕಾಂತಿ, ಕಡಲೆ, ಅವರೆ ಸೇರಿ ದಂತೆ 13 ಬೆಳೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿದೆ. ರೈತರು ಫಸಲು ತಂದು ಕೊಟ್ಟ ಕೂಡಲೇ ರಾಜ್ಯ ಸರ್ಕಾರ ಖರೀದಿ ಮಾಡಲಿದೆ ಎಂದರು.

ರೈತರಿಗೆ ಫಸಲನ್ನು ಈಗಲೇ ಮಾರಾಟ ಮಾಡಲು ಇಚ್ಛೆ ಇಲ್ಲವಾದಲ್ಲಿ ಶೇಖರಣೆ ಮಾಡಿ ತಮಗೆ ಬೇಕಾದ ಸಮಯದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಲು ಸಹ ಸರ್ಕಾರ ಅವಕಾಶ ನೀಡಿದೆ. ಇದಕ್ಕಾಗಿಯೇ ಮುಂಗಡ ಪಾವತಿಯೊಂದಿಗೆ ಶೇಖ ರಣೆ ವ್ಯವಸ್ಥೆಯನ್ನೂ ಮಾಡಿದೆ. ರೈತರು ತಮ್ಮ ಫಸಲನ್ನು ಸರ್ಕಾರದ ಗೋದಾಮಿನಲ್ಲಿ ತಂದಿಟ್ಟು ಮುಂಗಡವಾಗಿ ಹಣ ಪಡೆಯಬಹುದು. ಬಳಿಕ ಬೆಲೆ ಏರಿಕೆಯಾದ ನಂತರವಷ್ಟೇ ಮಾರಾಟ ಮಾಡಬಹುದಾಗಿದೆ. ಉತ್ಪಾದನಾ ವೆಚ್ಚ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ನಿಗದಿಯನುಸಾರ ಬೆಳೆಗೆ ಉತ್ತಮ ಬೆಲೆ ನೀಡಲಾಗುವುದು ಎಂದರು. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಮುಂಗಾರು ಆಗಮನಕ್ಕೂ ಮುನ್ನಾ ರಾಜ್ಯದಲ್ಲಿ ರೋಹಿಣಿ ಮಳೆಯಾಗಿದೆ ಹಾಗೂ ಮುಂಗಾರು ಆಗಮನಕ್ಕೂ ಮುನ್ನಾ ಬಿತ್ತನೆ ಬೀಜ ಮಾರಾಟ ಭರದಿಂದ ಸಾಗಿದ್ದು ರಾಜ್ಯದ ರೈತರು ಆಹಾರ ಬೆಳೆ ಉತ್ಪಾದನೆಯಲ್ಲಿ ಉತ್ಸುಕತೆ ತೋರಿದ್ದಾರೆ ಇದೊಂದು ಆಶಾದಾಯಕ ಬೆಳವಣಿಗೆ. ಆದರೆ ಹಲವು ವರ್ಷ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಕೆಂದ್ರದ ಒಪ್ಪಿಗೆ ಪಡೆಯಬೇಕಾಗಿತ್ತು. ಆದರೆ ಇಂದು ಆಯಾ ರಾಜ್ಯ ಸರ್ಕಾ ರವೇ ಬೆಲೆ ನಿಗದಿ ಮಾಡಬಹುದಾಗಿದ್ದು ಕೃಪಾ ಯೋಜನೆ ಯಡಿ ರಾಜ್ಯದ ಸುಮಾರು 175 ಕೃಷಿ ಮಾರುಕಟ್ಟೆ ಕೆಂದ್ರದಲ್ಲಿನ ಮಾರಾಟವಾದ ಬೆಳೆಗಳ ಮಾರಾಟದ ಬೆಂಬಲ ಬೆಲೆ ನಿಗದಿ ಯಾದ ಮಾಹಿತಿಯನ್ನು ಕ್ಷಣದಲ್ಲಿ ಪಡೆಯಬಹುದಾಗಿದೆ. ಇದರಿಂದ ಬೆಲೆಯ ಏರುಪೇರು ಆಗುವ ಬಗ್ಗೆ ಮಾಹಿತಿಯನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪಡೆಯಬಹುದು ಈ ತಂತ್ರಾಂಶವನ್ನು ಐಬಿಎಂ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾ ಗಿದೆ ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳಾದ ಆಲೂಗಡ್ಡೆ, ಟೊಮ್ಯಾಟೊ, ಹಾಗೂ ಈರುಳ್ಳಿ ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ. ಆದರೆ ರಾಜ್ಯ ಸರ್ಕಾರ ಉತ್ಪಾದನೆ ಅನುಸಾರ ಈ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡು ತ್ತದೆ ಇದಕ್ಕಾಗಿಯೇ ಸರ್ಕಾರ 50 ಕೋಟಿ ಮೀಸಲಿರಿಸಿದೆ ಎಂದು ಸರ್ಕಾರದ ಉದ್ದೇಶವನ್ನು ಇದೇ ವೇಳೆ ವಿವರಿಸಿದರು.