ನಿವೃತ್ತಿ ವೇತನಕ್ಕೆ ಆಗ್ರಹ: ಸಿಜಿಬಿ ನೌಕರರ ಮತ ಪ್ರದರ್ಶನ

ಮೈಸೂರು: ಗ್ರಾಮೀಣ ಬ್ಯಾಂಕ್‍ಗಳಲ್ಲಿನ ದಿನಗೂಲಿ ಮತ್ತು ಹೊರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ವಾಣಿಜ್ಯ ಬ್ಯಾಂಕ್‍ಗಳ ಉದ್ಯೋಗಿಗಳಿಗೆ ಇರುವ ನಿವೃತ್ತಿ ವೇತನವನ್ನು ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಮೀಣ ಬ್ಯಾಂಕ್‍ಗಳ ನೌಕರರಿಗೂ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಅಧಿಕಾರಿಗಳು (ಎಆರ್‍ಆರ್‍ಬಿಇಎ) ಮತ್ತು ನೌಕರರ (ಎಕೆಜಿಬಿಇಎಫ್) ಸಂಘಗಳು ಬುಧವಾರ ಮೈಸೂರಿನಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ಎದುರು ಮತ ಪ್ರದರ್ಶನ ನಡೆಸಿದರು.

1993ರ ಒಪ್ಪಂದದಂತೆ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಇಂಕ್ರಿಮೆಂಟ್ ನೀಡಬೇಕು, 10ನೇ ವೇತನ ಪರಿಷ್ಕರಣೆಯನ್ನು ಪೂರ್ಣ ಪ್ರಮಾಣದಲ್ಲಿ ಗ್ರಾಮೀಣ ಬ್ಯಾಂಕ್ ನೌಕರ ರಿಗೂ ಜಾರಿಗೊಳಿಸಬೇಕು. ಸಿಬ್ಬಂದಿ ಕಲ್ಯಾಣ ಯೋಜನೆಯನ್ನು ಗ್ರಾಮೀಣ ಬ್ಯಾಂಕ್ ಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.
ಎರಡೂ ಸಂಘಗಳ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್.ಕೃಷ್ಣಮೂರ್ತಿ ಮತ್ತು ವಿ.ಆರ್.ಶ್ರೀನಿವಾಸ್ ಹಾಗೂ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮತ ಪ್ರದರ್ಶನದ ನೇತೃತ್ವ ವಹಿಸಿದ್ದರು.