ರೋಹಿಣ ಸಿಂಧೂರಿ ವರ್ಗಾವಣೆ ಪ್ರಕರಣ: ವಿಚಾರಣೆ ನಾಳೆಗೆ ಮುಂದೂಡಿಕೆ

ಹಾಸನ: ಡಿಸಿ ರೋಹಿಣ ಸಿಂಧೂರಿ ವರ್ಗಾವಣೆ ಪ್ರಕರಣದ ಪ್ರಾಥಮಿಕ ವಿಚಾರಣೆ ಆಲಿಸಿದ ಹೈಕೋರ್ಟ್ ನ್ಯಾಯ ಮೂರ್ತಿಗಳು ವಿಚಾರಣೆಯನ್ನು ಏ. 27ಕ್ಕೆ ಮುಂದೂಡಿದ್ದಾರೆ.

ನ್ಯಾಯಮೂರ್ತಿಗಳಾದ ಹೆಚ್.ಜಿ.ರಮೇಶ್ ಮತ್ತು ಬಿ.ಶ್ರೀನಿ ವಾಸೇಗೌಡ ಅವರಿದ್ದ ಪೀಠವು ಪ್ರಕರಣದ ಪ್ರಾಥಮಿಕ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಮುಂದೂಡಿದ್ದಾರೆ. ವರ್ಗಾವಣೆ ಸಂಬಂಧ ಸಿಎಟಿ ತೀರ್ಪು ಪ್ರಶ್ನಿಸಿ ರೋಹಿಣ ಸಿಂಧೂರಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.