ಮೃಗಾಲಯಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ

ಮೈಸೂರು:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವದ ಅಂಗವಾಗಿ ಆ.29ರಂದು ಮೈಸೂರಿನ ಮೃಗಾಲಯದ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಲು ಶ್ರೀ ಸುತ್ತೂರು ಮಠದಿಂದ ನೀಡುವ 1 ಲಕ್ಷ ರೂ.ಗಳ ಚೆಕ್ಕನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಯವರಿಗೆ ನೀಡಿದರು. ಈ ವೇಳೆ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಆರ್.ಎಸ್. ನಂಜುಂಡಸ್ವಾಮಿ, ಗಣೇಶ್ ಮತ್ತಿತರರಿದ್ದರು.