ಮನೆ ಬೀಗ ಮುರಿದು ನಗ, ನಾಣ್ಯ ಕಳವು

ಅರಕಲಗೂಡು: ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಅರಕಲಗೂಡು ತಾಲೂಕು, ಕೇರಳಾ ಪುರ ಗ್ರಾಮದಲ್ಲಿ ನ.28ರಂದು ನಡೆದಿದೆ.

ಗ್ರಾಮದ ಶ್ರೀನಿವಾಸ ಅವರು ನ.28 ರಂದು ಕುಟುಂಬ ಸಮೇತರಾಗಿ ಮಂತ್ರಾ ಲಯ ಯಾತ್ರೆಗೆ ಹೊರಟಿದ್ದು, ಈ ಸಂದರ್ಭ ದಲ್ಲಿ ಅವರ ಮನೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು 35 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ 2 ಉಂಗುರ, 2 ಬೆಳ್ಳಿ ಕುಂಕುಮ ಬಟ್ಟಲು ಮತ್ತು 20 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಈ ಸಂಬಂಧ ಕೊಣನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೈಕ್ ಕಳವು: ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿರುವ ಘಟನೆ ಹಾಸನದ ವಿವೇಕಾನಂದ ರಸ್ತೆಯಲ್ಲಿ ನ.26ರಂದು ನಡೆದಿದೆ. ಬೇಲೂರು ತಾಲೂಕು ಸಿದ್ದನ ಹಳ್ಳಿ ಗ್ರಾಮದ ಎಸ್.ಡಿ.ಶ್ರೀಪತಿ ಅವರು ತಮ್ಮ ಬೈಕ್ ಅನ್ನು (ಕೆಎ46 ಹೆಚ್ 1157) ಹಾಸನದ ವಿವೇಕಾನಂದ ರಸ್ತೆಯ ರಾಮಕೃಷ್ಣ ಶಾಲೆ ಬಳಿ ನಿಲ್ಲಿಸಿದ್ದು, ಅದನ್ನು ಕಳವು ಮಾಡಲಾಗಿದೆ. ಈ ಸಂಬಂಧ ಹಾಸನ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.